ADVERTISEMENT

ಸಂಚಾರ ಬಂದ್; ಚೆಕ್ ಪೋಸ್ಟ್ ಬಳಿ ವಾಹನಗಳ ಸಾಲು

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 22:08 IST
Last Updated 18 ಜುಲೈ 2024, 22:08 IST
   

ಮಡಿಕೇರಿ: ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಕರ್ತೋಜಿ ಸಮೀಪ ಗುಡ್ಡ ಕುಸಿತದ ಭೀತಿಯ ಕಾರಣಕ್ಕೆ ಗುರುವಾರ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಬಂದ್ ಮಾಡಲಾಗಿದೆ.

ಇದರಿಂದ ಕಿ.ಮೀಗಟ್ಟಲೆ ವಾಹನಗಳು ಸಂಪಾಜೆ ಚೆಕ್ ಪೋಸ್ಟ್ ನಿಂದ ಆಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸಾಲುಗಟ್ಟಿ ನಿಂತಿವೆ.

ಸಂಜೆ ವೇಳೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜುಲೈ 22ರವರೆಗೆ ನಿತ್ಯ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಂಚಾರ ಬಂದ್ ಮಾಡಿ ಆದೇಶ ಹೊರಡಿಸಿದ್ದರು. ಇದರ ಅರಿವಿರದೇ ಮಂಗಳೂರಿನಿಂದ ಬಂದ ವಾಹನ ಸವಾರರು ಪರದಾಡಿದರು‌. ಕೆಲವರು ತಮಗೆ ಊಟ ಇಲ್ಲ ನೀರೂ ಇಲ್ಲ ರಾತ್ರಿ ಇಡೀ ಹೇಗೆ ಕಾಲ ಕಳೆಯುವುದು ಎಂದು ಚೆಕ್‌ ಪೋಸ್ಟ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.