ಗೋಣಿಕೊಪ್ಪಲು: ಪೊನ್ನಂಪೇಟೆ ಸೇರಿದಂತೆ ಕಿರುಗೂರು, ಮತ್ತೂರು, ನಲ್ಲೂರು ಕುಂದ ಮೊದಲಾದ ಭಾಗಗಳಲ್ಲಿ ಶನಿವಾರ ಮಧ್ಯಾಹ್ನ ಉತ್ತಮ ಮಳೆ ಸುರಿಯಿತು.
ಬೆಳಿಗ್ಗೆ ಬಿಸಿಲಿನ ತಾಪಮಾನ ಏರಿತ್ತು. ಬಳಿಕ 2 ಗಂಟೆ ವೇಳೆಗೆ ಮೋಡಕವಿದು 20 ನಿಮಿಷಗಳ ಕಾಲ ರಭಸದ ಮಳೆ ಸುರಿಯಿತು. ಮಳೆ ನೀರಿಗೆ ರಸ್ತೆ ಬದಿಯ ಕಾಲುವೆಗಳು ತಂಬಿ ಹರಿದವು. ಡಾಂಬರ್ ರಸ್ತೆ ಮೇಲೆಲ್ಲ ನೀರು ಹರಿದಾಡಿತು. ವಾತಾವರಣ ತಂಪಾಯಿತು. ಒಣಗಿದ್ದ ಕಾಲುವೆಗಳು ಹಾಗೂ ಹೊಂಡಗಳಲ್ಲಿ ನೀರು ತುಂಬಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.