ADVERTISEMENT

ಸುಂಟಿಕೊಪ್ಪ | ನಿಂತಿದ್ದ ಬಸ್‌ಗೆ ಡಿಕ್ಕಿ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 14:23 IST
Last Updated 25 ಜೂನ್ 2024, 14:23 IST
ಸುಂಟಿಕೊಪ್ಪ ‌ಸಮೀಪದ ಕೆದಕಲ್‌ ಗ್ರಾಮದ ಭದ್ರಕಾಳಿ ದೇವಾಲಯದ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಮತ್ತೊಂದು ಬಸ್ ಡಿಕ್ಕಿ ಹೊಡೆದು ಮತ್ತೊಂದು ಬಸ್ ಜಖಂಗೊಂಡಿರುವುದು
ಸುಂಟಿಕೊಪ್ಪ ‌ಸಮೀಪದ ಕೆದಕಲ್‌ ಗ್ರಾಮದ ಭದ್ರಕಾಳಿ ದೇವಾಲಯದ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಮತ್ತೊಂದು ಬಸ್ ಡಿಕ್ಕಿ ಹೊಡೆದು ಮತ್ತೊಂದು ಬಸ್ ಜಖಂಗೊಂಡಿರುವುದು   

ಸುಂಟಿಕೊಪ್ಪ: ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿದ್ದ ಬಸ್ಸಿನ ಹಿಂಬದಿಗೆ ಮತ್ತೊಂದು ಬಸ್ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಸಮೀಪದ ಕೆದಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕೆದಕಲ್ ಗ್ರಾಮದ ರುಕಿಯಾ ಮತ್ತು ಸಫೀನಾ ಗಾಯಗೊಂಡವರು. ಕೆದಕಲ್ ಭದ್ರಕಾಳಿ ದೇವಸ್ಥಾನದಿಂದ ಅನತಿ ದೂರದಲ್ಲಿ ಮಹಿಳೆಯರು ಮಡಿಕೇರಿ ಕಡೆಯಿಂದ ಬಂದು ನಿಂತ ಸರ್ಕಾರಿ ಸಿಟಿ ಬಸ್ಸಿನ ಮೆಟ್ಟಿಲೇರುತ್ತಿದ್ದರು. ಇದೇ ಸಂದರ್ಭ ಹಿಂಬದಿಯಲ್ಲಿ ಬಂದ ಇನ್ನೊಂದು ಸರ್ಕಾರಿ ಬಸ್ ಸಿಟಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಸಿಟಿ ಬಸ್ ಹತ್ತುತ್ತಿದ್ದ ಮಹಿಳೆಯರಿಗೆ ತಲೆ ಮತ್ತು ಕೈಗೆ ಗಾಯವಾಗಿ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿಕ್ಕಿಯ ರಭಸಕ್ಕೆ ಡಿಕ್ಕಿ ಹೊಡೆದ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.