ಮಡಿಕೇರಿ: ಬೆಂಗಳೂರಿನ ಗ್ರೀನ್ಹುಡ್ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ (ಸಿಐಎಸ್ಸಿಇ) ವಲಯಮಟ್ಟದ ಬ್ಯಾಡ್ಮಿಮಿಂಟನ್ ಟೂರ್ನಿಯ 19ರ ವಯೋಮಿತಿ ವಿಭಾಗದ ಡಬಲ್ಸ್ನಲ್ಲಿ ಗೋಣಿಕೊಪ್ಪಲಿನ ಕಾಲ್ಸ್ (ಕೆಎಎಲ್ಎಸ್) ಶಾಲೆಯ ವಿದ್ಯಾರ್ಥಿಗಳಾದ ತನಿಷ್ ಮುತ್ತಪ್ಪ ಹಾಗೂ ಕುಶಾಗ್ರ ಶ್ರೀವತ್ಸ ಅವರು ಮೊದಲ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ತನಿಷ್ ಮುತ್ತಪ್ಪ ದ್ವಿತೀಯ ಸ್ಥಾನ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.