ADVERTISEMENT

ವಿರಾಜಪೇಟೆ | ಮಳೆ ನೀರಿನೊಳಗೆ ಬಿದ್ದಿದ್ದ ಯುವಕನನ್ನು ಎಳೆದೊಯ್ದ ಕಾರು

kodagu

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 5:23 IST
Last Updated 31 ಜುಲೈ 2024, 5:23 IST

ವಿರಾಜಪೇಟೆ: ಇಲ್ಲಿನ ಎರಡನೇ ಪೆರುಂಬಾಡಿ ನಿವಾಸಿ ಚಂದನ್ (24) ಎಂಬುವವರು ಬೈಕ್‌ನಲ್ಲಿ ಬರುವಾಗ ರಸ್ತೆಯಲ್ಲಿ ಬಿದ್ದಿದ್ದಾರೆ. ಇವರನ್ನು ಕಾರೊಂದು ಸುಮಾರು 5 ಕಿ.ಮೀ ದೂರಕ್ಕೆ ಎಳೆದೋಯ್ದಿದ್ದು, ಚಂದನ್‌ ಮೃತಪಟ್ಟಿದ್ದಾರೆ.

ಬೈಕ್‌ನಿಂದ ಬಿದ್ದಾಗ ಇವರ ಮೇಲೆ ಮಳೆ ನೀರು ಆವರಿಸಿದೆ. ಕಾರಿನ ಚಾಲಕನಿಗೆ ಸುರಿಯುತ್ತಿದ್ದ ಮಳೆಯಿಂದ ಹಾಗೂ ತುಂಬಿದ್ದ ನೀರಿನಿಂದ ಯುವಕನ ದೇಹ ಕಾಣಿಸಿಲ್ಲ. ಈ ವೇಳೆ ಕಾರಿನ ಹಿಂಬದಿಗೆ ಯುವಕ ಧರಿಸಿದ್ದ ಬ್ಯಾಗ್ ಸಿಕ್ಕಿ ಹಾಕಿಕೊಂಡು ಆರ್ಜಿ ಗ್ರಾಮದ ಸಮೀಪದವರೆಗೂ ಎಳೆದೋಯ್ದಿದೆ. ಸದ್ಯ ಕಾರಿನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT