ಮಡಿಕೇರಿ: ಬಸ್ ಸಂಚಾರಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದವರು ಬಸ್ನಲ್ಲೇ ವಾಪಸ್ ತಮ್ಮ ಗ್ರಾಮಕ್ಕೆ ತೆರಳಿದರು.
ಇಲ್ಲಿನ ಬಸ್ಡಿಪೊ ಮುಂದೆ ಶುಕ್ರವಾರ ಬಂದ ಸೂರ್ಲಬ್ಬಿ ವಿಭಾಗದ ಹತ್ತಾರು ಗ್ರಾಮಗಳ ಜನರು ತಮ್ಮ ಗ್ರಾಮಗಳಿಗೆ ಬಸ್ ಸಂಚಾರ ಬೇಕು ಎಂದು ಪ್ರತಿಭಟನೆ ಆರಂಭಿಸಿದರು.
ಸೂರ್ಲಬ್ಬಿ ಗ್ರಾಮಕ್ಕೆ 2018ರಲ್ಲಿ ಒಟ್ಟು 3 ಬಸ್ಗಳು ತೆರಳುತ್ತಿದ್ದವು. ಆದರೆ, ನಂತರ ಒಂದು ಬಸ್ ಅನ್ನು ನಿಲ್ಲಿಸಲಾಗಿತ್ತು. ನಿಲ್ಲಿಸಿರುವ ಬಸ್ ಸೇವೆಯನ್ನು ಮತ್ತೆ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಬಸ್ ಸಂಚಾರವನ್ನು ಕೂಡಲೇ ಆರಂಭಿಸಿದರು. ಸಂಚಾರ ಆರಂಭಿಸಿದ ಬಸ್ನಲ್ಲೇ ಗ್ರಾಮಸ್ಥರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ್ದು ವಿಶೇಷ ಎನಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.