ವಿರಾಜಪೇಟೆ: ಮಾದಕವಸ್ತು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿ, 5 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಪೆರುಂಬಾಡಿಯ ತಂಗುದಾಣವೊಂದರ ಬಳಿ ಕಾರ್ಯಾಚರಣೆ ನಡೆಸಿದ ನಗರ ಠಾಣೆಯ ಪೊಲೀಸರು ಪೆರುಂಬಾಡಿ ಗ್ರಾಮದ ನಿವಾಸಿಗಳಾದ ಶಫೀಕ್, ಮಹಮ್ಮದ್ ಆಸೀಂ, ಸಮೀರ್ ಹಾಗೂ ಮುನೀರ್ ಎಂಬುವವರೆ ಬಂಧಿತರು. ಇಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳಿಂದ 1.8 ಕೆ.ಜಿ ಗಾಂಜಾ , 4 ದ್ವಿಚಕ್ರ ವಾಹನ,1 ಕಾರನ್ನು ಮುಟ್ಟುಗೋಲುಹಾಕಲಾಗಿದೆ.
ಡಿವೈಎಸ್ಪಿ ಮೋಹನ್ ಕುಮಾರ್, ಸಿ.ಪಿ.ಐ ಶಿವರುದ್ರ ಮಾರ್ಗದರ್ಶನದಲ್ಲಿ, ನಗರ ಠಾಣೆ ಪಿಎಸ್ಐ ರವೀಂದ್ರ, ಮಂಜುನಾಥ್, ಗಿರೀಶ್, ಕೆ.ಎಂ.ಧರ್ಮ, ಸತೀಶ್ ಬಿ.ವಿ, ಮೋಹನ್ ಟಿ.ಕೆ, ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.