ADVERTISEMENT

ವೇಮಗಲ್: ಅದ್ದೂರಿ ಹೂವಿನ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 14:38 IST
Last Updated 30 ಏಪ್ರಿಲ್ 2024, 14:38 IST
ವೇಮಗಲ್‌ನಲ್ಲಿ ಸೋಮವಾರ ರಾತ್ರಿ ಹಸಿಕರಗ ನಡೆಯಿತು
ವೇಮಗಲ್‌ನಲ್ಲಿ ಸೋಮವಾರ ರಾತ್ರಿ ಹಸಿಕರಗ ನಡೆಯಿತು   

ವೇಮಗಲ್: ಪಟ್ಟಣದ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿಯ 49ನೇ ವರ್ಷದ ಹಸಿ ಕರಗ ಮಹೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.

ಉತ್ಸವದ ಅಂಗವಾಗಿ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಲ್ಲಿಗೆಯಿಂದ ತಯಾರಿಸಿದ್ದ ಹಸಿಕರಗವನ್ನು ಹೊತ್ತು ಪಟ್ಟಣದ ಕಲ್ವಮಂಜಲಿ ರಸ್ತೆಯಲ್ಲಿ ಸಾಗಿದರು. ಹಸಿಕರಗ ಸಾಗುತ್ತಿದ್ದರೆ ಕರಗಕ್ಕೆ ಮಲ್ಲಿಗೆ ಹೂವು ಎಸೆಯುತ್ತ ಗೋವಿಂದಾ ಗೋವಿಂದಾ ನಮಸ್ಮಾರಣೆಯಲ್ಲಿ ಪಟ್ಟಣದ ಬೀದಿಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ವೀರಕುಮಾರರು ಕತ್ತಿ ಹಿಡಿದು ಕರಗವನ್ನು ಹಿಂಬಾಲಿಸಿದರು. 

ವಹ್ನಿಕುಲದ ಗೌಡರು, ಯಜಮಾನರು, ಕುಲದ ಅಧ್ಯಕ್ಷರು, ಕುಲದ ಸರ್ವ ಸದಸ್ಯರು, ಪಟ್ಟಣದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.