ADVERTISEMENT

ಮುಳಬಾಗಿಲು: ಮಸೀದಿಗೆ ಕಲ್ಲು ಹೊಡೆದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:14 IST
Last Updated 29 ಜೂನ್ 2024, 16:14 IST
ಮುಳಬಾಗಿಲು ತಾಲ್ಲೂಕಿನ ಸೊಣ್ಣವಾಡಿ ಗ್ರಾಮದಲ್ಲಿ ಮಸೀದಿಗೆ ಕಲ್ಲು ಹೊಡೆದ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು.
ಮುಳಬಾಗಿಲು ತಾಲ್ಲೂಕಿನ ಸೊಣ್ಣವಾಡಿ ಗ್ರಾಮದಲ್ಲಿ ಮಸೀದಿಗೆ ಕಲ್ಲು ಹೊಡೆದ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು.   

ಮುಳಬಾಗಿಲು: ತಾಲ್ಲೂಕಿನ ಸೊನ್ನವಾಡಿ ಗ್ರಾಮದ ಜಾಮಿಯಾ ಮಸೀದಿಗೆ ಶನಿವಾರ ವ್ಯಕ್ತಿಯೊಬ್ಬ ಕಲ್ಲು ಹೊಡೆದಿದ್ದಾನೆ.

ಕಲ್ಲು ಹೊಡೆದ ಆರೋಪದ ಮೇಲೆ ಗ್ರಾಮದ ಸುಬ್ರಮಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಕೋಮುಭಾವನೆ ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮಸೀದಿಯತ್ತ ಕಲ್ಲು ತೂರಿ, ಕಿಟಕಿಯ ಗಾಜುಗಳನ್ನು ಧ್ವಂಸ ಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT
ಆರೋಪಿ ಸುಬ್ರಮಣಿ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.