ADVERTISEMENT

ಕೊಪ್ಪಳ | ಮೊಹರಂ ವೇಳೆ ಗಲಾಟೆ: 12 ಜನರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 7:03 IST
Last Updated 20 ಜುಲೈ 2024, 7:03 IST

ಕೊಪ್ಪಳ: ಮೊಹರಂ ಹಬ್ಬದ ವೇಳೆ ಇಲ್ಲಿನ ದೇವರಾಜ ಅರಸ್ ಕಾಲೊನಿಯಲ್ಲಿ ಎರಡು ಗುಂಪುಗಳ ಜನರ ನಡುವೆ ಪರಸ್ಪರ ಕೈಕೈ ಮಿಲಾಯಿಸಿದ ಘಟನೆ ನಡೆದ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಪೊಲೀಸರು 12 ಜನರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಸಾರ್ವಜನಿಕವಾಗಿ ಹೊಡೆದಾಡಿಕೊಂಡಿದ್ದರಿಂದ ಶಾಂತಿಗೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗುರುವಾರ ಅಲಾಯ್ ದೇವರು ಹೊಳಿಗೆ ಹೋಗುವ ಮೆರವಣಿಗೆ ವೇಳೆ ಈ ಗಲಾಟೆ ನಡೆದಿದ್ದು, ಎರಡು ಗುಂಪಿನವರು ಹೊಡೆದಾಡಿಕೊಂಡಿದ್ದಾರೆ.

ಕಳವು: ಇಲ್ಲಿನ ಶಾಂತಿನಿಕೇತನ ಬಡಾವಣೆಯಲ್ಲಿ ವಾಸವಿರುವ ಕೊಟ್ರಪ್ಪ ಹೈದರಿ ಎಂಬುವರ ಮನೆಯಲ್ಲಿ  ₹1.05 ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.