ಕಾರಟಗಿ: ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ತಾಲ್ಲೂಕು ಕಾರ್ಯಾಧ್ಯಕ್ಷರಾಗಿ ಹಡಪದ ವೀರೇಶ ವೀರಭದ್ರಪ್ಪ ದೇವರಮನಿ ನೇಮಕಗೊಂಡಿದ್ದಾರೆ.
ವೇದಿಕೆಯ ರಾಜ್ಯ ಉಪಾದ್ಯಕ್ಷ ಅಜ್ಜಪ್ಪ ಕರಡಕಲ್ಲ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ಶಿವರಾಜ್ ಉಳ್ಳಾಗಡ್ಡಿ ಸೂಚನೆ ಮೇರೆಗೆ ಈಚೆಗೆ ನಡೆದ ರಕ್ತದಾನ ಶಿಬಿರದಲ್ಲಿ ನೇಮಕಾತಿ ಪತ್ರ ವಿತರಿಸಲಾಯಿತು ಎಂದು ವೇದಿಕೆಯ ತಾಲ್ಲೂಕಾಧ್ಯಕ್ಷ ಮಾರುತಿ ಎಚ್. ಹಡಪದ ಹಾಗೂ ಉಪಾಧ್ಯಕ್ಷ ಕಿರಣ್ ಸಿಂಗ್ ತಿಳಿಸಿದ್ದಾರೆ. ನೀಲಪ್ಪ, ವೀರುಪಾಕ್ಷಿ, ವೀರನಗೌಡ, ಕಿಶೋರ್, ನಾಗರಾಜ್ ಭೋವಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.