ADVERTISEMENT

ಕನಕಗಿರಿ: ದೇಗುಲಕ್ಕೆ ಬಂದ ಕರಡಿ!

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 16:31 IST
Last Updated 18 ಡಿಸೆಂಬರ್ 2023, 16:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕನಕಗಿರಿ: ಸಮೀಪದ ರಾಂಪುರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.

ಗ್ರಾಮದ ಹನುಮಂತ ದೇವರ ದೇವಸ್ಥಾನದೊಳಗೆ ಬಂದಿದ್ದ ಕರಡಿಯನ್ನು ಕಂಡ ನಾಯಿಗಳು ಬೊಗಳಿದ‌ ಪರಿಣಾಮ ಕರಡಿ ಅಲ್ಲಿಂದ ಹೊರಗೆ ಬಂದಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹನುಮೇಶ ಹನುಮಂತಪ್ಪ ತಿಳಿಸಿದರು.

ADVERTISEMENT

ದೇಗುಲಕ್ಕೆ ಬಾಗಿಲು ಇಲ್ಲ, ಭಕ್ತರು ಹನುಮಂತ ದೇವರ ಮೂರ್ತಿಗೆ ಹಾಕಲಾದ ಎಣ್ಣೆ ನೆಕ್ಕಲು ಬಂದಿದೆ ಇದು ಹೊಸದಲ್ಲ ಎಂದು ಅವರು ಮಾಹಿತಿ ನೀಡಿದರು. ಈ ಬಗ್ಗೆ ವಿಡಿಯೊ ವೈರಲ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.