ADVERTISEMENT

ಕರಡಿ ದಾಳಿ: ರೈತನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 5:11 IST
Last Updated 27 ಜೂನ್ 2024, 5:11 IST

ಕನಕಗಿರಿ: ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ಕರಡಿ ದಾಳಿ ಮಾಡಿದ ಘಟನೆ‌ ತಾಲ್ಲೂಕಿನ ಪರಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ಶಂಕ್ರಪ್ಪ ಕುರಿ ಗಾಯಗೊಂಡವರು ಎಂದು ತಿಳಿದು ಬಂದಿದೆ. ತಲೆ, ಕೈ, ಮೈ, ಕಾಲುಗಳಿಗೆ ಗಾಯವಾಗಿದೆ.

ಗ್ರಾಮದ‌ ರಸ್ತೆಯಲ್ಲಿ ಹೊಲವಿದ್ದು ಅಲ್ಲಿಯೇ ಇದ್ದ ಯುವಕರು ಕೂಗಾಡಿದ್ದರಿಂದ ಕರಡಿ‌ ಓಡಿ‌ ಹೋಗಿದೆ. ತೀವ್ರವಾಗಿ ಗಾಯಗೊಂಡಿರುವ ಶಂಕ್ರಪ್ಪ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ‌ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.