ADVERTISEMENT

ಸಾಲದ ಹೊರೆ ತಾಳದೇ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 10:33 IST
Last Updated 23 ಜುಲೈ 2024, 10:33 IST

ಕಾರಟಗಿ: ಸಾಲದ ಹೊರೆಯಿಂದ ಬಳಲಿದ್ದ ತಾಲ್ಲೂಕಿನ ಹುಳ್ಕಿಹಾಳ ಗ್ರಾಮದ ರೈತ ನರಸಪ್ಪ ಗಂಗಾವತಿ (45) ಹೊಲದಲ್ಲಿ ರಾಸಾಯನಿಕ ಕುಡಿದು ಆಸ್ಪ‍ತ್ರೆಯಲ್ಲಿ ಮೃತಪಟ್ಟಿದ್ದಾರೆ.

ನರಸಪ್ಪ ಹೊಲದ ಮೇಲೆ ₹2.50 ಲಕ್ಷ ಮತ್ತು ಕೈಗಡವಾಗಿ ₹6ರಿಂದ ₹7 ಲಕ್ಷ ಸಾಲ ಮಾಡಿದ್ದು, ಬೆಳೆ ಸರಿಯಾಗಿ ಬಾರದ್ದರಿಂದ ಸಾಲ ಹೇಗೆ ತೀರಿಸಬೇಕು ಎಂದು ಗೋಳಾಡುತ್ತಿದ್ದ. ಈ ಕುರಿತು ನಾನು ಹಾಗೂ ನನ್ನ ಇನ್ನುಳಿದ ಮಕ್ಕಳು ಬುದ್ಧಿವಾದ ಹೇಳಿದ್ದರೂ ಯಾರೊಂದಿಗೂ ಹೆಚ್ಚು ಮಾತನಾಡದೆ ಮಾನಸಿಕವಾಗಿದ್ದ. ಭಾನುವಾರ ಹೊಲದಲ್ಲಿ ರಾಸಾಯನಿಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ನರಸಪ್ಪ ಅವರ ತಾಯಿ ಮಲ್ಲಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನಾಧರಿಸಿ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT