ಕೊಪ್ಪಳ: ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ವಿಶ್ವಕರ್ಮ ಸಮಾಜದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ರುದ್ರಪ್ಪ ಬಡಿಗೇರ ಅವರ ಬಣಕ್ಕೆ ಭರ್ಜರಿ ಜಯವಾಗಿದೆ. ಇಲ್ಲಿನ ಶಾಸಕರ ಮಾದರಿ ಶಾಲಾ ಆವರಣದಲ್ಲಿ ಭಾನುವಾರ ನಡೆದ ಜಿಲ್ಲಾ ವಿಶ್ವಕರ್ಮ ಸಮಾಜದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನಡೆಯಿತು.
ಒಟ್ಟು 104 ಮತದಾರರಲ್ಲಿ 103 ಜನ ಮತ ಚಲಾಯಿಸಿದರು. ಒಟ್ಟು 20 ಅಭ್ಯರ್ಥಿಗಳಲ್ಲಿ ರುದ್ರಪ್ಪ ಬಡಿಗೇರ ಅವರ ಬಣದ 11 ಜನ ಅಭ್ಯರ್ಥಿಗಳನ್ನು ಜಯ ಪಡೆದರು. ಇನ್ನೊಂದು ಬಣದಲ್ಲಿದ್ದ ಒಂಬತ್ತು ಜನರ ಪೈಕಿ ಇಬ್ಬರು ಗೆಲುವು ಸಾಧಿಸಿದರು.
ರುದ್ರಪ್ಪ ಬಣದ ಅಂಬ್ರೇಶ್ ಕೆ.ವಿಶ್ವಕರ್ಮ (74), ಈಶಪ್ಪ ಈ.ಬಡಿಗೇರ (69), ಎ.ಪ್ರಕಾಶ (76), ಕಾಳಪ್ಪ ಬಡಿಗೇರ ಕಾರಟಗಿ (72), ದೇವೇಂದ್ರಪ್ಪ ವೈ.ಬಡಿಗೇರ (76) ನಾಗೇಶಕುಮಾರ ಎಂ.ಕಂಸಾಲಿ (72), ಬಸವರಾಜ ಎಸ್.ಕೊಡೇಕಲ್ (72), ಮಂಜುನಾಥ ಎಸ್.ಪತ್ತಾರ ಗಂಗಾವತಿ (73), ಯಮನೂರಪ್ಪ ಎಂ.ಬಡಿಗೇರ, (67), ರಾಮಚಂದ್ರಪ್ಪ ಜಿ.ಬಡಿಗೇರ (74,) ಮತ್ತು ವಿರೇಶ ಪತ್ತಾರ ಕಾರಟಗಿ (74) ಮತಗಳನ್ನು ಗಳಿಸಿದರು.
ಇನ್ನೊಂದು ಬಣದಲ್ಲಿ ಮಹದೇವಪ್ಪ ಕಮ್ಮಾರ (51) ಹಾಗೂ ದೇವೇಂದ್ರಪ್ಪ ದೊಡ್ಡಬಸಪ್ಪ ಬಡಿಗೇರ್ (43) ಜಯ ಸಾಧಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.