ADVERTISEMENT

ಕನಕಗಿರಿ | ಉತ್ತಮ ಮಳೆ: ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 18 ಮೇ 2024, 13:50 IST
Last Updated 18 ಮೇ 2024, 13:50 IST
ಕನಕಗಿರಿ ಸಮೀಪದ ಸೋಮಸಾಗರ ಗ್ರಾಮದ ರಸ್ತೆಯಲ್ಲಿ ರೈತ ಕೃಷ್ಣಮೂರ್ತಿ ದಾಸರ ಅವರು ಹೊಲ ಹದ ಮಾಡುತ್ತಿರುವುದು
ಕನಕಗಿರಿ ಸಮೀಪದ ಸೋಮಸಾಗರ ಗ್ರಾಮದ ರಸ್ತೆಯಲ್ಲಿ ರೈತ ಕೃಷ್ಣಮೂರ್ತಿ ದಾಸರ ಅವರು ಹೊಲ ಹದ ಮಾಡುತ್ತಿರುವುದು   

ಕನಕಗಿರಿ: ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ತಾಲ್ಲೂಕಿನ ರೈತರು ಸಂತಸಗೊಂಡಿದ್ದು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಮುಂಗಾರು ಹಂಗಾಮಿಗೆ ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ನವಲಿ, ಹುಲಿಹೈದರ ಹೋಬಳಿ ಪ್ರದೇಶದಲ್ಲಿ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. ಬಿತ್ತನೆಗಾಗಿ ಭೂಮಿ ಹದ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಮಳೆರಾಯ ಕೃಪೆ ತೋರಿದ್ದಾನೆ. ಮಳೆಯಿಂದ ಹೊಲ ಹಸಿಯಾಗಿದ್ದು ಹದಗೊಳಿಸಿ ಬಿತ್ತನೆ ಕಾರ್ಯ ಆರಂಭಿಸಲು ಸಿದ್ದತೆ ಕೈಗೊಂಡಿದ್ದೇವೆ ಎಂದು ರೈತ ಕೃಷ್ಣಮೂರ್ತಿ ದಾಸರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT