ಕೊಪ್ಪಳದ ಚಿತ್ರಗಾರ ಸಮುದಾಯದವರು ಕಿನ್ನಾಳ ಕಲೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಈ ಕಲೆಯನ್ನು ಬಳಸುವುದರ ಜೊತೆಗೆ, ತಾವೂ ಬೆಳೆಯುತ್ತಿದ್ದಾರೆ. 550 ವರ್ಷಗಳ ಇತಿಹಾಸ ಇರುವ ಈ ಕಲೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಶ್ರಮಿಸುತ್ತಿರುವವರಲ್ಲಿ ಪ್ರಮುಖರು ಕೊಪ್ಪಳದ ಸಂತೋಷಕುಮಾರ ಚಿತ್ರಗಾರ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಂತೋಷಕುಮಾರ್, ಕಿನ್ನಾಳ ಕಲೆಯಲ್ಲಿ ರೂಪಿಸಿರುವ ‘ದೇವತೆ’ಯ ಕಲಾಕೃತಿ ಅವರ ಪ್ರತಿಭೆಗೆ ಸಾಕ್ಷಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.