ಕಾರಟಗಿ: ಪಟ್ಟಣದ ಕೆರೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಣಜಿಗ ಸಮಾಜದವರ ಸಭೆ ಭಾನುವಾರ ನಡೆದು, ಬಣಜಿಗರ ಕ್ಷೇಮಾಭಿವೃದ್ದಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು: ವೀರೇಶಪ್ಪ ಚಿನಿವಾಲ (ಗೌರವಾಧ್ಯಕ್ಷ), ಜಗದೀಶಪ್ಪ ಅವರಾಧಿ (ಅಧ್ಯಕ್ಷ) ಚಂದ್ರಶೇಖರ ಸೋಮಲಾಪುರ (ಪ್ರಧಾನ ಕಾರ್ಯದರ್ಶಿ), ವಿಜಯಲಕ್ಷ್ಮೀ ಅಂಗಡಿ (ಮಹಿಳಾ ಘಟಕದ ಅಧ್ಯಕ್ಷೆ) ರತ್ನಮ್ಮ ಬಪ್ಪೂರ (ಪ್ರಧಾನ ಕಾರ್ಯದರ್ಶಿ) ಬಸವರಾಜ ಗದ್ದಿ (ಯುವ ಘಟಕದ ಅಧ್ಯಕ್ಷ), ಮಲ್ಲಿಕಾರ್ಜುನ ಯತ್ನಟ್ಟಿ ಹುಳ್ಕಿಹಾಳ(ಪ್ರಧಾನ ಕಾರ್ಯದರ್ಶಿ)
ಸಂಘದ ವಿವಿಧ ಘಟಕಗಳಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸಮಾಜದವರು ಸನ್ಮಾನಿಸಿ, ಗೌರವಿಸಿದರು. ಸಂಘದ ಇತರ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.