ಗಂಗಾವತಿ (ಕೊಪ್ಪಳ ಜಿಲ್ಲೆ): ಇಲ್ಲಿನ ಕನಕಗಿರಿ ರಸ್ತೆಯ ಓವರ್ಬ್ರಿಡ್ಜ್ ಸಮೀಪದ ರೈಲು ಹಳಿಯ ನಡುವೆ ಕುಳಿತು ಗುರುವಾರ ರಾತ್ರಿ ಮದ್ಯಪಾನ ಮಾಡುತ್ತಿದ್ದ ವೇಳೆ ರೈಲಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ.
ಗಂಗಾವತಿಯ ಮೌನೇಶ ಪತ್ತಾರ (23), ಸುನೀಲ್ ತಿಮ್ಮಣ್ಣ (23) ಹಾಗೂ ವೆಂಕಟ್ ಮಂಗಳೂರು (20) ಮೃತರು. ಈ ರೈಲು ಹುಬ್ಬಳ್ಳಿಯಿಂದ ಗಂಗಾವತಿ, ಕಾರಟಗಿ ಮಾರ್ಗವಾಗಿ ಸಿಂಧನೂರಿಗೆ ತೆರಳುತ್ತಿತ್ತು.
‘ಇವರು ಕುಳಿತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ತಿರುವು ಇರುವುದರಿಂದ ರೈಲು ಬರುವುದು ಕುಳಿತವರಿಗೆ ಕಾಣಿಸಿಲ್ಲ. ಹತ್ತಿರ ಬಂದಾಗ ರೈಲು ನಿಲ್ಲಿಸಲು ಲೋಕೊಪೈಲಟ್ಗೆ ಸಾಧ್ಯವಾಗಿಲ್ಲ. ಈ ಅವಘಡದಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪ್ರಕರಣ ದಾಖಲಿಸಿಕೊಂಡಿರುವ ಗದಗ ರೈಲ್ವೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.