ADVERTISEMENT

ತುಂಗಭದ್ರಾ ಜಲಾಶಯ: ಮೂರನೇ ಎಲಿಮೆಂಟ್ ‌ಅಳವಡಿಕೆಯೂ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 10:33 IST
Last Updated 17 ಆಗಸ್ಟ್ 2024, 10:33 IST
<div class="paragraphs"><p>ತುಂಗಭದ್ರಾ ಜಲಾಶಯದ ಗೇಟ್‌ ಬಂದ್‌</p></div>

ತುಂಗಭದ್ರಾ ಜಲಾಶಯದ ಗೇಟ್‌ ಬಂದ್‌

   

ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್ ಸಂಖ್ಯೆ 19ಕ್ಕೆ ತಾತ್ಕಾಲಿಕವಾಗಿ ಎಲಿಮೆಂಟ್ ಅಳವಡಿಕೆ ಕಾರ್ಯ ಯಶಸ್ಸಿನ ಹಾದಿಯಲ್ಲಿ ‌ಸಾಗಿದ್ದು, ಮೂರನೆ ಎಲಿಮೆಂಟ್ ಅಳವಡಿಕೆಯೂ ಶನಿವಾರ ಯಶಸ್ಸು ಕಂಡಿದೆ.

ರಭಸವಾಗಿ ಹರಿಯುವ ನೀರಿನ ನಡುವೆಯೂ ತಾಂತ್ರಿಕ ಸಿಬ್ಬಂದಿ ತಂಡ ಮೂರನೆ ಎಲಿಮೆಂಟ್ ಅಳವಡಿಸಿತು. 19ನೇ ಗೇಟ್ ಅಕ್ಕಪಕ್ಕದ ಗೇಟ್ ಗಳಿಂದ ನೀರು ಹರಿಸುವುದನ್ನು ನಿಲ್ಲಿಸಿ ಹೊಸ ಗೇಟ್‌ ನ ಕಾರ್ಯಭಾರ ನಿರ್ವಹಣೆ ಸಾಮರ್ಥ್ಯ ಬಗ್ಗೆಯೂ ಪರೀಕ್ಷೆ ಮಾಡಲಾಯಿತು.

ADVERTISEMENT

ಒಟ್ಟು ಐದು ಎಲಿಮೆಂಟ್ ಅಳವಡಿಸಬೇಕಾಗಿದ್ದು ಈಗಾಗಲೇ ಮೂರು ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿವೆ

ಜಲಾಶಯದ ಎಲ್ಲ ಗೇಟ್ ಬಂದ್

ತುಂಗಭದ್ರಾ ಜಲಾಶಯದಲ್ಲಿ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿರುವ ಕಾರಣ ಅಕ್ಕಪಕ್ಕದ ಎಲ್ಲ ಗೇಟ್ ಗಳನ್ನು ಬಂದ್ ಮಾಡಲಾಗಿದೆ. 19ನೇ ಗೇಟ್ ಮೂಲಕವೇ ಜಲಾಶಯದ ಎಲ್ಲ ನೀರನ್ನು ಹೊರ ಬಿಟ್ಟು ನೀರಿನ ರಭಸ ತಡೆಯುವಿಕೆ ಪರೀಕ್ಷೆ ಮಾಡಲಾಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.