ಶ್ರೀರಂಗಪಟ್ಟಣ: ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸೋಮವಾರ ಚಾಲನೆ ನೀಡಿದರು.
‘ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸದ್ಯ ₹5 ಲಕ್ಷ ಬಿಡುಗಡೆ ಮಾಡಲಾಗಿದೆ. ಭವನದ ಮುಂದುವರೆದ ಕಾಮಗಾರಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಶಾಸಕರು ತಿಳಿಸಿದರು.
ಹಂಪಾಪುರ ಗ್ರಾಮದಲ್ಲಿ ಗರಡಿ ಮನೆ ನಿರ್ಮಿಸಬೇಕು. ಬಸವನ ಗುಡಿ ಅಭಿವೃದ್ಧಿ ಆಗಬೇಕು. ಕಾಳಿ ಸಿದ್ದನಹುಂಡಿ ಸಂಪರ್ಕ ರಸ್ತೆ ಮತ್ತು ಗ್ರಾಮದ ಒಳಗಿನ ರಸ್ತೆಗಳು ಹಾಗೂ ಚರಂಡಿಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಆದ್ಯತೆ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಕೃಷ್ಣ, ಪಿಕಾರ್ಡ್ ನಿರ್ದೇಶಕರಾದ ಶಿವಣ್ಣ, ಪುಟ್ಟಸ್ವಾಮಿ, ಮುಖಂಡ ಮಹದೇವಪುರ ಬಸವರಾಜು, ಗ್ರಾ.ಪಂ. ಸದಸ್ಯರಾದ ಮೋಹನಕುಮಾರ್, ಹೆಬ್ಬಾಡಿ ಬಾಲು, ಹೆಬ್ಬಾಡಿಹುಂಡಿ ಈರೇಗೌಡ, ಯಜಮಾನ್ ಸಿದ್ದೇಗೌಡ, ಯಜಮಾನ್ ರಾಮಯ್ಯ, ಚಿಕ್ಕದಾಸಯ್ಯ, ಶಿವಮಲ್ಲು, ರಾಜೇಶ್ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.