ADVERTISEMENT

Cauvery issue: ಸಿಎಂ ಅಂಕಲ್, ತಮಿಳುನಾಡಿಗೆ ನೀರು ಬಿಡಬೇಡಿ ಪ್ಲೀಸ್...

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 8:02 IST
Last Updated 23 ಸೆಪ್ಟೆಂಬರ್ 2023, 8:02 IST
<div class="paragraphs"><p>ಮಂಡ್ಯದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಕ್ಕಳು ಖಾಲಿ ಕೊಡ ಹೊತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡರು</p></div>

ಮಂಡ್ಯದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಕ್ಕಳು ಖಾಲಿ ಕೊಡ ಹೊತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡರು

   

ಮಂಡ್ಯ: 'ಕುಡಿಯಲು ನೀರಿಲ್ಲ, ಗದ್ದೆ ಕೆಲಸಕ್ಕೆ ನೀರಿಲ್ಲ, ಹಸುವಿಗೆ ನೀರಿಲ್ಲ. ಸಿ.ಎಂ ಅಂಕಲ್ ಪ್ಲೀಸ್ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ' ಎಂದು ತಾಲ್ಲೂಕಿನ ಕ್ಯಾತುಂಗೆತೆ ಗ್ರಾಮದ ಶಾಲಾ ಬಾಲಕಿಯರು ಮುಗ್ಧವಾಗಿ ಹೇಳಿದರು.

ಕ್ಯಾತುಂಗೆರೆ ಗ್ರಾಮಸ್ಥರು ಮಕ್ಕಳೊಂದಿಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಪ್ರತಿಭಟನಾ‌ ಸ್ಥಳಕ್ಕೆ ಮೆರವಣಿಗೆ ಮೂಲಕ ಬಂದು ಬೆಂಬಲ ನೀಡಿದರು.

ADVERTISEMENT

ಮಳೆ ಇಲ್ಲದ ಕಾರಣ ನಾಲೆಯಲ್ಲಿ ನೀರು ಬರುತ್ತಿಲ್ಲ. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು. ಖಾಲಿ ಕೊಡ ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.