ADVERTISEMENT

ಹಲಗೂರು: ತೆಂಗು, ಅಡಿಕೆ ತೋಟ ಬೆಂಕಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 13:22 IST
Last Updated 6 ಫೆಬ್ರುವರಿ 2024, 13:22 IST
ಹಲಗೂರು ಸಮೀಪದ ಸಾಗ್ಯ ಗ್ರಾಮದಲ್ಲಿ ರಾಜಣ್ಣ ಅವರ ಅಡಿಕೆ ತೋಟ ಬೆಂಕಿಗೆ ಸಿಲುಕಿ ಹಾನಿಗೊಳಗಾಗಿದೆ
ಹಲಗೂರು ಸಮೀಪದ ಸಾಗ್ಯ ಗ್ರಾಮದಲ್ಲಿ ರಾಜಣ್ಣ ಅವರ ಅಡಿಕೆ ತೋಟ ಬೆಂಕಿಗೆ ಸಿಲುಕಿ ಹಾನಿಗೊಳಗಾಗಿದೆ   

ಹಲಗೂರು: ಸಮೀಪದ ಸಾಗ್ಯ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ವಿವಿಧ ತಳಿಯ ಮರಗಳು ಬೆಂಕಿಗೆ ಆಹುತಿಯಾಗಿದೆ.

‘ಸಾಗ್ಯ ಗ್ರಾಮದ ರೈತ ರಾಜಣ್ಣ ಎಂಬುವವರು ತಮ್ಮ ಮೂರು ಎಕರೆ ಜಮೀನಿನಲ್ಲಿ ತೆಂಗು, ಅಡಿಕೆ, ಮಹಾಘನಿ, ಮಾವು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಬೆಳೆಸಿದ್ದರು. ಸೋಮವಾರ ಮಧ್ಯಾಹ್ನ ತೆಂಗಿನ ಮರಕ್ಕೆ ವಿದ್ಯುತ್ ಸ್ಪರ್ಶ ಆಗಿದ್ದು, ಬೆಂಕಿ ಇಡೀ ತೋಟಕ್ಕೆ ಆವರಿಸಿಕೊಂಡಿದೆ. ತೋಟದಲ್ಲಿ ನೀರು ಹಾಯಿಸಲು ಅಳವಡಿಸಿದ್ದ ಹನಿ ನೀರಾವರಿ ಪೈಪುಗಳು ಸುಟ್ಟು ಹೋಗಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ರಾಜಣ್ಣ ಆಗ್ರಹಿಸಿದರು.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.