ಭಾರತೀನಗರ: ಸಮೀಪದ ಅಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಪ್ರಕಾಶ್ ರಾಜ್ ಸಾರಥ್ಯದ ನಿರ್ದಿಗಂತ ತಂಡದ ಕಲಾವಿದರು ಸಾಮಾಜಿಕ ಸಾಮರಸ್ಯ, ಕಳಕಳಿ ಮೂಡಿಸುವ ಕಿರು ನಾಟಕಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.
ಗ್ರಾಮದ ರಾಮ ಮಂದಿರದ ಆವರಣದಲ್ಲಿ ಕಲಾವಿದರು ಕೆರೆಗಳನ್ನು ಉಳಿಸುವ ಕುರಿತು ಜಾಗೃತಿ ಮೂಡಿಸುವ ಒಂದು ಆಮೆಯ ಕಥೆ, ವರ್ಣಭೇದ ತೊಡೆದು ಹಾಕುವ ಫುಟ್ಬಾಲ್ ಆಟಗಾರ ಓಝಿಲ್ ಕಥೆಯಾಧಾರಿತ ಬ್ಲಾಕಿ ಸೇರಿದಂತೆ ಹಲವು ಕಿರು ನಾಟಕಗಳನ್ನು ಪ್ರದರ್ಶಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ನಿರ್ದಿಗಂತದ 10ಕ್ಕೂ ಹೆಚ್ಚು ಕಲಾವಿದರು ಕಿರು ನಾಟಕ ಪ್ರದರ್ಶಿಸಿದರು. ಸಿಆರ್ಪಿ ನಂದೀಶ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೋಭಾ, ಪ್ರೌಢಶಾಲಾ ಮುಖ್ಯ ಶಿಕ್ಷಕ ಅನಂತ ನಾರಾಯಣ್ ಉಪಸ್ಥಿತರಿದ್ದರು.
ಸಾಮರಸ್ಯದ ಜಾಗೃತಿ ಮೂಡಿಸಿದ ಕಲಾವಿದರು
ಭಾರತೀನಗರ: ಸಮೀಪದ ಅಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಪ್ರಕಾಶ್ ರಾಜ್ ಸಾರಥ್ಯದ ನಿರ್ದಿಗಂತ ಫೌಂಡೇಷನ್ನ ಕಲಾವಿದರು ಸಾಮಾಜಿಕ ಸಾಮರಸ್ಯ ಕಳಕಳಿ ಮೂಡಿಸುವ ಕಿರು ನಾಟಕಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.
ಗ್ರಾಮದ ರಾಮ ಮಂದಿರದ ಆವರಣದಲ್ಲಿ ಕಲಾವಿದರು ಕೆರೆಗಳನ್ನು ಉಳಿಸುವ ಕುರಿತು ಜಾಗೃತಿ ಮೂಡಿಸುವ ಒಂದು ಆಮೆಯ ಕಥೆ ವರ್ಣಭೇದ ತೊಡೆದು ಹಾಕುವ ಫುಟ್ಬಾಲ್ ಆಟಗಾರ ಓಝಿಲ್ ಕಥೆಯಾದಾರಿ ಬ್ಲಾಕಿ ಸೇರಿದಂತೆ ಹಲವು ಕಿರು ನಾಟಕಗಳನ್ನು ಪ್ರದರ್ಶಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ನಿರ್ಧಿಗಂತ ಫೌಂಡೇಷನ್ನ 10ಕ್ಕೂ ಹೆಚ್ಚು ಕಲಾವಿದರು ಕಿರು ನಾಟಕ ಪ್ರದರ್ಶಿಸಿದರು. ಸಿಆರ್ಪಿ ನಂದೀಶ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೋಭಾ ಪ್ರೌಢಶಾಲಾ ಮುಖ್ಯ ಶಿಕ್ಷಕ ಅನಂತ ನಾರಾಯಣ್ ಸೇರಿದಂತೆ ಶಿಕ್ಷಕ ವೃಂದ ಫೌಂಢೇಷನ್ನ ಮುಖ್ಯಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.