ADVERTISEMENT

ಮಂಡ್ಯ | ಕುಡಿದ ನಶೆಯಲ್ಲಿ ಮಾತಿನ ಚಕಮಕಿ; ಸುತ್ತಿಗೆಯಿಂದ ಹೊಡೆದು ಸ್ನೇಹಿತನ ಕೊಲೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 6:29 IST
Last Updated 28 ಅಕ್ಟೋಬರ್ 2024, 6:29 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಪಾಂಡವಪುರ(ಮಂಡ್ಯ): ಕುಡಿದ ನಶೆಯಲ್ಲಿ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದು, ಕೋಪದಲ್ಲಿ ಸ್ನೇಹಿತನಿಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಚಿನಕುರುಳಿ ಗ್ರಾಮದಲ್ಲಿ ನಡೆದಿದೆ.

ADVERTISEMENT

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಅರವಿಂದ್(27) ಕೊಲೆಯಾದ ಯುವಕ. ವಿಜಯ್ ಹತ್ಯೆ ಮಾಡಿದ ಆರೋಪಿ.

ಇಬ್ಬರು ನಾಗಮಂಗಲ ತಾಲ್ಲೂಕಿನ ತಿರುಮಲಾಪುರ ಗ್ರಾಮದವರು. ಕಲ್ಲು ಕೆಲಸ‌ ಮಾಡಲೆಂದು ಜೊತೆಗೆ ಬಂದಿದ್ದರು. ಕುಮಾರ್ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

'ಕುಡಿದ ಮತ್ತಿನಲ್ಲಿ ನಿನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿರುವುದಾಗಿ‌ ಅರವಿಂದ್ ಹೇಳಿದ್ದಾನೆ. ಇದರಿಂದ ಕುಪಿತಗೊಂಡ ವಿಜಯ್ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಮತ್ತೊಬ್ಬ ಸ್ನೇಹಿತ ಏಳುಮಲೈ ಜತೆಗಿದ್ದ. ಘಟನೆ ಸಂಬಂಧ ಆರೋಪಿ ವಿಜಯ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.