ADVERTISEMENT

ಬೆಳಕವಾಡಿ | ಅಕ್ರಮ ಗಾಂಜಾ; ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 15:33 IST
Last Updated 13 ಮಾರ್ಚ್ 2024, 15:33 IST
<div class="paragraphs"><p> ಬಂಧನ</p></div>

ಬಂಧನ

   

ಬೆಳಕವಾಡಿ: ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಐದು ಮಂದಿಯನ್ನು ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ಬೆಳಕವಾಡಿ ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲದ ಫಯಾಜ್, ವರುಣ್ ಕುಮಾರ್, ಮಳವಳ್ಳಿ ಪಟ್ಟಣದ ಕೋಟೆ ಬೀದಿಯ ಅರುಣ್, ಮುಸ್ಲಿಂ ಬ್ಲಾಕ್ ನ ಅರ್ಬಜ್ ಪಾಷಾ, ಬಿಜಿಪುರದ ಶ್ರೀಕಾಂತ್ ಬಂಧಿತರು.

ADVERTISEMENT

ಭಾನುವಾರ ಫಯಾಜ್, ವರುಣ್ ಕುಮಾರ್ ಬೈಕ್‌ನಲ್ಲಿ ಮಳವಳ್ಳಿ ಕಡೆಗೆ ಗಾಂಜಾ ಸಾಗಿಸುತ್ತಿದ್ದರು. ಇದೇ ವೇಳೆ ಗಾಂಜಾ ಖರೀದಿಸಲು ಮಳವಳ್ಳಿಯಿಂದ ಬಂದಿದ್ದ ಅರುಣ್, ಅರ್ಬಜ್ ಪಾಷಾ, ಶ್ರೀಕಾಂತ್‌ನನ್ನು ಡಿವೈಎಸ್ಪಿ ವಿ.ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 1.5 ಕೆ.ಜಿ. ಗಾಂಜಾ ವಶ ಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಪಿಐ ಬಿ.ಎಸ್.ಶ್ರೀಧರ್, ಪಿಎಸ್ಐ ವಿ.ಸಿ.ಅಶೋಕ್, ಸಿಬ್ಬಂದಿಗಳಾದ ನಾಗೇಂದ್ರ, ನಿಂಗರಾಜು, ಅವಿನಾಶ್, ಮಹೇಶ್ ಇದ್ದರು.

ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.