ಶ್ರೀರಂಗಪಟ್ಟಣ: ಮಾತೆ ಕಾವೇರಿ ಜಾಗೃತಿ ತೀರ್ಥಯಾತ್ರೆ ಮತ್ತು ತುಲಾ ಕಾವೇರಿ ಮಹಾ ಆರತಿ ಉತ್ಸವದ ನಿಮಿತ್ತ ಪಟ್ಟಣದಲ್ಲಿ ಸೋಮವಾರ (ಅ.21) ಸಂಜೆ ಕಾವೇರಿ ಮಹಾ ಆರತಿ ನಡೆಯಲಿದೆ.
ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿಯ ಸ್ನಾನಘಟ್ಟದ ಬಳಿ, ಜ್ಯೋತಿಷಿ ವಿ. ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಅಂದು ಸಂಜೆ 6.30ಕ್ಕೆ ಕಾವೇರಿ ಮಹಾ ಆರತಿ ಜರಗುಲಿದೆ. ಗಂಜಾಂನ ಆದಿ ಶಂಕರ ಮಠ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಠದ ಉಸ್ತುವಾರಿ ಪ್ರವೀಣ್ ಶ್ರೀರಾಮ್ ಇತರರು ಪಾಲ್ಗೊಳ್ಳಲಿದ್ದಾರೆ.
ಇದಕ್ಕೂ ಮುನ್ನ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ವರೆಗೆ ನಡೆಯುತ್ತಿರುವ ಕಾವೇರಿ ಜಾಗೃತಿ ಯಾತ್ರೆಯು ಸೋಮವಾರ ಸಂಜೆ 5 ಗಂಟೆಗೆ ಗಂಜಾಂನ ಆದಿ ಶಂಕರ ಮಠದ ಆವರಣಕ್ಕೆ ಆಗಮಿಸಲಿದೆ. ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಯಾತ್ರೆಯ ಜತೆ ಬರುವವರನ್ನು ಸ್ವಾಗತಿಸಲಿದ್ದಾರೆ ಎಂದು ಆದಿ ಶಂಕರ ಮಠದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.