ಮೇಲುಕೋಟೆ: ಎಚ್.ಡಿ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಮಂತ್ರಿಯಾದ ಕಾರಣ ಅಭಿಮಾನಿಯೊಬ್ಬ ಮೇಲುಕೋಟೆ ಯೋಗನರಸಿಂಹಸ್ವಾಮಿ ಬೆಟ್ಟವನ್ನು ಮಂಡಿಯಲ್ಲಿ ಹತ್ತಿ ಹರಕೆ ತೀರಿಸಿದ್ದಾರೆ.
ಮಂಡ್ಯ ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮದ ಲೋಕೇಶ್ ಸುದ್ದಿಗಾರರೊಂದಿಗೆ ಮಾತನಾಡಿ, 'ಎಚ್.ಡಿ.ಕೆ. ಅವರ ಅಪ್ಪಟ ಅಭಿಮಾನಿ ನಾನು. ಅವರು ಕೇಂದ್ರದಲ್ಲಿ ಮಂತ್ರಿಯಾಗಬೇಕು ಮತ್ತು ಅವರ ಆರೋಗ್ಯ ವೃದ್ಧಿಯಾಗಬೇಕು ಎಂದು ಮೇಲುಕೋಟೆ ಬೆಟ್ಟದ ಯೋಗನರಸಿಂಹ ಸ್ವಾಮಿಗೆ ಹರಕೆ ಮಾಡಿಕೊಂಡಿದ್ದೆ' ಎಂದರು.
'ನನ್ನ ಬೇಡಿಕೆ ಫಲಿಸಿದ್ದರಿಂದ ಇಲ್ಲಿಗೆ ಬಂದು ಹರಕೆ ತಿರಿಸಿದ್ದೇನೆ' ಎಂದು ದೇವಾಲಯ ತೆರೆಯುವ ಮುನ್ನವೇ ಬೆಟ್ಟ ಹತ್ತುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.