ADVERTISEMENT

ಪಾಂಡವಪುರ | ಮಳೆ: ಧರೆಗುರುಳಿದ ವಿದ್ಯುತ್ ಕಂಬ, ಮರ

​ಪ್ರಜಾವಾಣಿ ವಾರ್ತೆ
Published 9 ಮೇ 2024, 13:47 IST
Last Updated 9 ಮೇ 2024, 13:47 IST
ಪಾಂಡವಪುರ ತಾಲ್ಲೂಕಿನ ದೇವೇಗೌಡನಕೊಪ್ಪಲು ಗ್ರಾಮದ ಪುಟ್ಟಣ್ಣ ಎಂಬುವರ ಮನೆಮೇಲೆ ತೆಂಗಿನ ಮರ ಬಿದ್ದಿರುವುದು.
ಪಾಂಡವಪುರ ತಾಲ್ಲೂಕಿನ ದೇವೇಗೌಡನಕೊಪ್ಪಲು ಗ್ರಾಮದ ಪುಟ್ಟಣ್ಣ ಎಂಬುವರ ಮನೆಮೇಲೆ ತೆಂಗಿನ ಮರ ಬಿದ್ದಿರುವುದು.   

ಪಾಂಡವಪುರ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಸುಮಾರು 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ತೆಂಗು ಹಾಗೂ ಇತರೆ ಮರಗಳು ಹಾಗೂ ಉರುಳಿಬಿದ್ದಿವೆ.

ತಾಲ್ಲೂಕಿನ ಚಿನಕುರಳಿ, ಬನ್ನಂಗಾಡಿ, ಕಟ್ಟೇರಿ, ಬೆಳ್ಳಾಳೆ, ಕನಗೋನಹಳ್ಳಿ, ಗೌರಿಕಟ್ಟೆ ಸರ್ಕಲ್, ಬಳಘಟ್ಟ, ಎಂ.ಆರ್.ಕೊಪ್ಪಲು, ಮೇಲುಕೋಟೆ, ಕ್ಯಾತನಹಳ್ಳಿ, ರಾಗಿಮುದ್ದನಹಳ್ಳಿ, ಅರಳಕುಪ್ಪೆ, ಹರವು, ಅಲ್ಪಹಳ್ಳಿ, ಅಂತನಹಳ್ಳಿ, ಟಿ.ಎಸ್.ಛತ್ರ ಗ್ರಾಮ ಸೇರಿ ಹಲವೆಡೆಗಳಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಕೆಲವೆಡೆ ರಸ್ತೆ ಮಧ್ಯಭಾಗಕ್ಕೆ ಮರಗಳು ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ADVERTISEMENT

ಅಪಾಯದಿಂದ ಪಾರು: ತಾಲ್ಲೂಕಿನ ದೇವೇಗೌಡನಕೊಪ್ಪಲು ಗ್ರಾಮದಲ್ಲಿ ಬಿರುಗಾಳಿಗೆ ಪುಟ್ಟಣ್ಣ ಅವರ ಹೆಂಚಿನ ಮನೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ಹೆಂಚು ಬಿರುಕು ಬಿಟ್ಟಿವೆ. ಮನೆಯಲ್ಲಿದ್ದ ಪುಟ್ಟಣ್ಣನವರ ಕುಟುಂಬ ಎಚ್ಚೆತ್ತುಕೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.