ಮಂಡ್ಯ: ಶೂ ಧರಿಸಿಲ್ಲ ಎಂಬ ಕಾರಣಕ್ಕೆ ನಗರದ ಅಭಿನವ ಭಾರತಿ ವಿದ್ಯಾ ಕೇಂದ್ರದ ಹಿರಿಯ ಪ್ರಾಥಮಿಕ ಶಾಲೆಯ ಮೂರು ವಿದ್ಯಾರ್ಥಿಗಳನ್ನು ಸೋಮವಾರ ಒಂದು ಗಂಟೆಗೂ ಹೆಚ್ಚು ಕಾಲ ಹೊರಗಡೆ ನಿಲ್ಲಿಸಲಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ. ನಗರದ ಸ್ಪೋರ್ಟ್ಸ್ ಹಾಸ್ಟೆಲ್ನಿಂದ ವಿದ್ಯಾರ್ಥಿಗಳು ಬರುತ್ತಿದ್ದರು ಎನ್ನಲಾಗಿದೆ.
‘ಮೂವರು ತಡವಾಗಿ ಬರುವುದನ್ನೇ ಅಭ್ಯಾಸ ಮಾಡಿಕೊಂಡಿದ್ದರು. ಶಿಕ್ಷಕರ ಮಾತು ಕೇಳುತ್ತಿರಲಿಲ್ಲ. ಶೈಕ್ಷಣಿಕ ಚಟುವಟಿಕೆಯಲ್ಲೂ ನಿರಾಸಕ್ತರಾಗಿದ್ದರು. ಹೀಗಾಗಿ ಕೇವಲ 10 ನಿಮಿಷ ಮಾತ್ರ ಶಾಲೆಯ ಕೊಠಡಿ ಹೊರಗೆ ನಿಲ್ಲಿಸಿದ್ದೆವು. ವಿದ್ಯಾರ್ಥಿಗಳಿಗೆ ಇಷ್ಟು ಶಿಕ್ಷೆ ಕೊಡಲು ಶಿಕ್ಷಕರಿಗೆ ಅಧಿಕಾರವಿಲ್ಲವೇ’ ಎಂದು ಮುಖ್ಯಶಿಕ್ಷಕಿ ಸೌಮ್ಯ ಕುಲಕರ್ಣಿ ಪ್ರಶ್ನಿಸಿದರು.
‘ಈ ವಿದ್ಯಾರ್ಥಿಗಳು ವಾರದಲ್ಲಿ ನಾಲ್ಕು ದಿನವೂ ಲೇಟಾಗಿ ಬರುತ್ತಿದ್ದರು, ತಡವಾಗಿ ಬರುವುದಲ್ಲದೇ ಶಾಲೆಯ ನಿಯೋಜನೆ ಕಾರ್ಯ ಮಾಡುತ್ತಿರಲಿಲ್ಲ ಜೊತೆಗೆ ಶಿಕ್ಷಕರ ಮಾತನ್ನು ಕೇಳುತ್ತಿರಲಿಲ್ಲ, ಅದರ ಭಾಗವಾಗಿ ಸೋಮವಾರವು ಸಹ ತಡವಾಗಿ ಬಂದಿದ್ದಾರೆ, ಇದರಿಂದ ಬೇಸರಗೊಂಡ ನಾವು ಕೇವಲ 10 ನಿಮಿಷ ಮಾತ್ರ ಶಾಲೆಯ ಕೊಠಡಿ ಹೊರಗಡೆ ನಿಲ್ಲಿಸಿದ್ದೆವು, ವಿದ್ಯಾರ್ಥಿಗಳಿಗೆ ಇಷ್ಟು ಶಿಕ್ಷೆಕೊಡಲು ನಮ್ಮ ಶಿಕ್ಷಕರಿಗೆ ಅಧಿಕಾರವಿಲ್ಲವೇ’ ಎಂದು ಶಾಲೆಯ ಮುಖ್ಯಶಿಕ್ಷಕಿ ಸೌಮ್ಯ ಕುಲಕರ್ಣಿ ಪ್ರಶ್ನಿಸಿದರು.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.