ADVERTISEMENT

ಕಿಕ್ಕೇರಿ | ಮದುವೆಯಾಗುವಂತೆ ಬಾಲಕಿಗೆ ಬೆದರಿಕೆ: ಅರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:13 IST
Last Updated 10 ಜುಲೈ 2024, 14:13 IST
ಸಚಿನ್
ಸಚಿನ್   

ಕಿಕ್ಕೇರಿ: ಹೋಬಳಿಯ ಸಾಸಲುಕೊಪ್ಪಲು ಗ್ರಾಮದ ಬಾಲಕಿಗೆ ಮದುವೆಯಾಗುವಂತೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆ.ಹೊಸಹಳ್ಳಿಯ ಸಚಿನ್ ಬಂಧಿತ. ಈತ ತನ್ನನ್ನು ಮದುವೆಯಾಗುವಂತೆ ಬಾಲಕಿಗೆ ಬಲವಂತ ಮಾಡಿದ್ದು, ಮದುವೆಯಾಗಲು ನಿರಾಕರಿಸಿದರೆ ಬಾಲಕಿಯ ತಾಯಿ, ಬಾಲಕಿ ಇಬ್ಬರನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಕಿಕ್ಕೇರಿ ಇನ್‌ಸ್ಪೆಕ್ಟರ್ ರೇವತಿ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.