ಮೈಸೂರು: ಎಐಯುಟಿಯುಸಿ ರಾಜ್ಯ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ. ಸೋಮಶೇಖರ್ ಬಳ್ಳಾರಿ ಆಯ್ಕೆಯಾದರು.
ಇಲ್ಲಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ಎಐಯುಟಿಯುಸಿಯ ನಾಲ್ಕನೇ ರಾಜ್ಯ ಸಮ್ಮೇಳನದ ಪ್ರತಿನಿಧಿಗಳ ಸಮಾವೇಶದಲ್ಲಿ ರಾಜ್ಯ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಉಪಾಧ್ಯಕ್ಷರಾಗಿ ಕೆ.ವಿ. ಭಟ್, ದೇವದಾಸ್, ಡಿ.ನಾಗಲಕ್ಷ್ಮಿ, ಎಂ. ಉಮಾದೇವಿ, ಎನ್.ಎಸ್. ವೀರೇಶ್, ಚಂದ್ರಶೇಖರ ಮೇಟಿ, ಟಿ.ಸಿ. ರಮಾ, ಪಿ.ಎಸ್. ಷಣ್ಮುಗಂ, ತಾಯಿದಾಸ್, ಎಚ್.ಟಿ. ಮಲ್ಲಿಕಾರ್ಜುನ್, ಮಂಜುನಾಥ್ ಕೈದಾಳೆ ಹಾಗೂ ಕಾರ್ಯದರ್ಶಿಯಾಗಿ ಕೆ. ಸೋಮಶೇಖರ್ ಯಾದಗಿರಿ ಆಯ್ಕೆಯಾದರು.
ಸೆಕ್ರೆಟರಿಯೇಟ್ ಸದಸ್ಯರಾಗಿ ಡಿ.ಉಮಾದೇವಿ, ವಿ.ಜಿ. ದೇಸಾಯಿ, ಎಸ್.ಎಂ. ಶರ್ಮ, ಜಿ. ಹನುಮೇಶ್, ಗಂಗಾಧರ ಬಡಿಗೇರ, ಪ್ರಮೋದ್, ಪಿ.ಎಸ್. ಸಂಧ್ಯಾ, ಮಂಜುನಾಥ್ ಕುಕ್ಕವಾಡ, ಮಹೇಶ ನಾಡಗೌಡ ಆಯ್ಕೆಯಾದರು. 33 ಕಾರ್ಯಕಾರಿ ಸದಸ್ಯರು ಸೇರಿದಂತೆ ಒಟ್ಟು 171 ಮಂದಿಯನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.
ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಬಲವಾದ ಹೋರಾಟ ರೂಪಿಸಲು ಸಮ್ಮೇಳನದಲ್ಲಿ ನಿರ್ಣಯಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.