ಮೈಸೂರು: ‘ಧರ್ಮಾಧ್ಯಕ್ಷರಾಗಿದ್ದ ಕೆ.ಎಂ.ವಿಲಿಯಂ ಅವರ ಕೊಲೆಗೆ ಪಿತೂರಿ ನಡೆಸುತ್ತಿರುವ ಆಡಿಯೊ ಎಂದು ನನ್ನ ಹಾಗೂ ಇತರ ಫಾದರ್ಗಳ ಚಿತ್ರಗಳೊಂದಿಗೆ ಯೂಟ್ಯೂಬ್ನಲ್ಲಿ ಹರಿದಾಡುತ್ತಿರುವ ವಿಡಿಯೊ ನಕಲಿಯಾಗಿದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಫಾದರ್ ಜ್ಞಾನಪ್ರಕಾಶ್ ತಿಳಿಸಿದರು.
ಮೈಸೂರು ಡಿವಿಜನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಅಸೋಸಿಯೇಶನ್ನಿಂದ ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ, ಫಾದರ್ ರೋಹನ್, ಫಾದರ್ ಅಂತೋಣಿರಾಜ್ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.
‘ಜ.13ರಂದು ಪೋಪ್ ಫ್ರಾನ್ಸಿಸ್ ಅವರ ಪತ್ರದಂತೆ ಧರ್ಮಾಧ್ಯಕ್ಷ ಸ್ಥಾನಕ್ಕೆ ಕೆ.ಎಂ.ವಿಲಿಯಂ ಅವರು ರಾಜೀನಾಮೆ ನೀಡಿದ್ದು, ಅಂಗೀಕಾರವೂ ಆಗಿದೆ. ಆದರೆ, ರಾಜೀನಾಮೆ ಬಗ್ಗೆ ಸಮುದಾಯದಲ್ಲಿ ಅನುಕಂಪ ಗಿಟ್ಟಿಸಲು ಈ ಗೊಂದಲ ಸೃಷ್ಟಿಸಲಾಗಿದೆ. ನಾವು ಅವರ ವಿರುದ್ಧ ಸತ್ಯ ಸಂಗತಿಗಳನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೆವು. ಹಾಗಾಗಿ ನಮ್ಮ ವಿರುದ್ಧವೂ ಬಿಷಪ್ ಹೌಸ್ನಲ್ಲಿ ಗಲಾಟೆ ಮಾಡಲಾಯಿತು’ ಎಂದರು.
‘ನಾವಾಗಲಿ, ಧರ್ಮಪ್ರಾಂತದ ಜನರಾಗಲಿ ಬಿಷಪ್ ಅವರನ್ನು ಬದಲಾಯಿಸುವ ಅಧಿಕಾರ ಹೊಂದಿಲ್ಲ. ನಾವು ಅವರ ತಪ್ಪುಗಳನ್ನು ಮೇಲಧಿಕಾರಿಗಳಿಗೆ ತಿಳಿಸಬಹುದು. ಉಳಿದದ್ದು, ಕೂಲಂಕಷ ತನಿಖೆಯೊಂದಿಗೆ ಪೋಪ್ ಆಣತಿಯಂತೆ ನಡೆದಿದೆ’ ಎಂದು ತಿಳಿಸಿದರು.
ಅಸೋಸಿಯೇಶನ್ ಅಧ್ಯಕ್ಷ ಜೆ.ಸ್ಟೀಫನ್ ಸುಜಿತ್, ಸದಸ್ಯರಾದ ಜಾನ್ಸನ್ ಬೆನ್ನ, ಮರಿಯ ಫ್ರಾನ್ಸಿಸ್, ಎಲ್ವಿನ್, ಆಂಬ್ರುಸ್ ಜಾರ್ಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.