ADVERTISEMENT

ಮೈಸೂರು | ಬಲಿಜ ಸಂಘ: ನಿರ್ದೇಶಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 4:41 IST
Last Updated 1 ಏಪ್ರಿಲ್ 2024, 4:41 IST
ಮೈಸೂರಿನ ಜಯನಗರದ ಕೃಷ್ಣದೇವರಾಯ ರಸ್ತೆಯಲ್ಲಿರುವ ಬಲಿಜ ಸಂಘದ ನಿರ್ದೇಶಕರಾಗಿ ಆಯ್ಕೆಯಾದವರು ಸಂಭ್ರಮ ಆಚರಿಸಿದರು
ಮೈಸೂರಿನ ಜಯನಗರದ ಕೃಷ್ಣದೇವರಾಯ ರಸ್ತೆಯಲ್ಲಿರುವ ಬಲಿಜ ಸಂಘದ ನಿರ್ದೇಶಕರಾಗಿ ಆಯ್ಕೆಯಾದವರು ಸಂಭ್ರಮ ಆಚರಿಸಿದರು   

ಮೈಸೂರು: ಇಲ್ಲಿನ ಜಯನಗರದ ಕೃಷ್ಣದೇವರಾಯ ರಸ್ತೆಯಲ್ಲಿರುವ ಬಲಿಜ ಸಂಘದ 2024-2029ನೇ ಸಾಲಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಮೀನಾ ತೂಗುದೀಪ್ ಶ್ರೀನಿವಾಸ್ ಸೇರಿದಂತೆ 15 ಮಂದಿ ಜಯಶೀಲರಾದರು.

30 ಮಂದಿ ಕಣದಲ್ಲಿದ್ದರು. ಅವರಲ್ಲಿ ಎಸ್. ಹೇಮಂತ್ ಕುಮಾರ್, ಕೆ. ಲಿಂಗರಾಜು, ಎಂ.ಎಸ್. ದಾಮೋದರ, ಜಿ. ಮಹೇಶ್ ನಾಯ್ಡು, ಮಂಜುನಾಥ್ ಆರ್, ಯತಿರಾಜ್, ಎಚ್.ವಿ. ಗೋವಿಂದರಾಜ್, ಪಿ. ಕಾಮರಾಜ್, ಯೋಗೀಶ್ ಎಂ.ಎಸ್., ರಾಘವೇಂದ್ರ ಎಂ.ಎಸ್, ಆರ್. ರವಿಕುಮಾರ್, ಕೆ. ನಾಗರಾಜು ಸಾಮಾನ್ಯ ವರ್ಗದಲ್ಲಿ ಗೆದ್ದರು. ಮಹಿಳಾ ಮೀಸಲು ಸ್ಥಾನಕ್ಕೆ ಮೀನಾ ತೂಗುದೀಪ್ ಶ್ರೀನಿವಾಸ್, ಸುನಿತಾ ಕೆ, ಪೂಜಾ ಈ. ಚುನಾಯಿತರಾದರು.

ತಂಡವನ್ನು ಮುಖಂಡರಾದ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಎಸ್.ಎನ್. ರಾಜೇಶ್, ಹರೀಶ್ ನಾಯ್ಡು, ಲೀಲಾ ನಾಯ್ಡು, ಆನಂದ್, ಚಿತ್ರನಟರಾದ ವಿಜಯ್ ಸೂರ್ಯ, ರಾಕೇಶ್ ನಾಯ್ಡು, ಕಿರಣ್ ನಾಯ್ಡು ಅಭಿನಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.