ADVERTISEMENT

ಬನ್ನೂರು | ಮಾಂಸಕ್ಕಾಗಿ ಕಾದಾಟ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 13:36 IST
Last Updated 14 ಏಪ್ರಿಲ್ 2024, 13:36 IST
ಕೃಷ್ಣಪ್ಪ
ಕೃಷ್ಣಪ್ಪ   

ಬನ್ನೂರು: ಇಲ್ಲಿನ ಹನುಮನಾಳು ಗ್ರಾಮದಲ್ಲಿ ವರ್ಷತ್ತೊಡಕಿಗೆ ಮಾಂಸ ನೀಡುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಏ.11ರಂದು ಜಗಳ ನಡೆದು, ಗಾಯಗೊಂಡಿದ್ದ ಕೃಷ್ಣಪ್ಪ ಶನಿವಾರ ಮೃತಪಟ್ಟರು.

‘ಯುಗಾದಿಯ ಮಾರನೇ ದಿನ ಗುಡ್ಡೆ ಮಾಂಸಕ್ಕಾಗಿ ಮಹಾದೇವ ಅವರು ರಾಜು ಅವರಿಗೆ ಹಣ ನೀಡಿದ್ದರು. ಆದರೆ ಬುಧವಾರ ಬೆಳಿಗ್ಗೆ ರಾಜು ಮಾಂಸ ನೀಡದಿದ್ದಾಗ ಎರಡೂ ಕುಟುಂಬಗಳ ನಡುವೆ ಜಗಳವಾಗಿದ್ದು, ಪರಸ್ಪರ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಮಹಾದೇವ ಅವರ ಮಾವ ಕೃಷ್ಣಪ್ಪ ಅವರಿಗೆ ಗಂಭೀರ ಗಾಯವಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾದೇವ ನೀಡಿದ ದೂರಿನಂತೆ ರಾಜು ಕುಟುಂಬದ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.