ಮೈಸೂರು: ಜಾನುವಾರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉದಯಗಿರಿ ಪೊಲೀಸರು ಬಂಧಿಸಿದ್ದು, 9 ಹಸು ರಕ್ಷಿಸಿದ್ದಾರೆ.
ನಗರದ ಗೌಸಿಯಾನಗರದ ಬಳಿಯ ಉಸ್ಮಾನಿಯ ಮಸೀದಿ ಬಳಿ ಭಾನುವಾರ ಸಂಜೆ ಗೂಡ್ಸ್ ವಾಹನವೊಂದು ಬಂದಿತ್ತು. ವಾಹನ ತಪಾಸಣೆ ಮಾಡಿದಾಗ ಹಸುಗಳನ್ನು ತುಂಬಿರುವುದು ಕಂಡುಬಂತು. ನಮ್ಮನ್ನು ಕಂಡೊಡನೆ ವಾಹನದಲ್ಲಿದ್ದ ಇಮ್ರಾನ್ ಎಂಬಾತ ಓಡಿ ಹೋದ. ಸ್ಥಳದಲ್ಲಿದ್ದ ಹೇಮಂತ್ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಹಸುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ತಂದಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.