ADVERTISEMENT

ಹುಣಸೂರು | ಮೌಸ್ ಡೀರ್ ಹತ್ಯೆ; ಇಬ್ಬರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2024, 15:45 IST
Last Updated 14 ಮೇ 2024, 15:45 IST
ನಾಗರಹೊಳೆ ರಾಷ್ಟ್ರೀಯ ಉದ್ಯಾನ ಆನೆಚೌಕೂರು ವಲಯದಲ್ಲಿ ಹೆಣ್ಣು ಕೂರ ( ಮೌಸ್ ಡೀರ್) ಭೇಟೆಯಾಡಿದ ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ಆನೆಚೌಕೂರು ವಲಯದಲ್ಲಿ ಹೆಣ್ಣು ಕೂರ ( ಮೌಸ್ ಡೀರ್) ಭೇಟೆಯಾಡಿದ ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಿದರು.   

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವಲಯದ ದೇವಮಟ್ಟಿಯಲ್ಲಿ ಮೌಸ್ ಡೀರ್ ಪ್ರಾಣಿಯನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

‘ಬಂಧಿತರಾದ ಮಂಜು ಮತ್ತು ಮೋಹನ್ ಎಂಬವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನೊಬ್ಬ ಆರೋಪಿ ಜಯಂತ್ ತಲೆಮರೆಸಿಕೊಂಡಿದ್ದಾರೆ. ಪತ್ತೆ ಕಾರ್ಯಾಚರಣೆ ತಂಡದಲ್ಲಿ ಆನೆಚೌಕೂರು ವಲಯ ಅಧಿಕಾರಿ ದೇವರಾಜ್, ಸಿಬ್ಬಂದಿ ಚನ್ನವೀರ ಗಾಣಗೇರ, ತಿಮ್ಮಣ್ಣ ಹಾಗೂ ಶಿವು ಇದ್ದರು’ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶನಾಲಯದ ಎಸಿಎಫ್ ದಯಾನಂದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT