ADVERTISEMENT

ಮೈಸೂರು: ಚಿರತೆ‌ ಮರಿ ಸೆರೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 7:27 IST
Last Updated 4 ಜೂನ್ 2023, 7:27 IST
ತಿ.ನರಸೀಪುರ ತಾಲ್ಲೂಕಿನ ಎಸ್.ದೊಡ್ಡಪುರದ ಜಮೀನಿನ ಬಳಿ ಸೆರೆಯಾದ ಚಿರತೆ ಮರಿ
ತಿ.ನರಸೀಪುರ ತಾಲ್ಲೂಕಿನ ಎಸ್.ದೊಡ್ಡಪುರದ ಜಮೀನಿನ ಬಳಿ ಸೆರೆಯಾದ ಚಿರತೆ ಮರಿ   

ತಿ.ನರಸೀಪುರ: ತಾಲ್ಲೂಕಿನ ಎಸ್.ದೊಡ್ಡಪುರದ ರಾಜೇಶ್ ಎಂಬುವವರ ಜಮೀನಿನ‌ ಬಳಿ ಇಟ್ಟಿದ್ದ ಬೋನಿಗೆ ಎರಡೂವರೆ ವರ್ಷದ ಹೆಣ್ಣು ಚಿರತೆ ಶನಿವಾರ ಸೆರೆ ಸಿಕ್ಕಿದೆ.

ಹಲವು ದಿನಗಳಿಂದ ವಡ್ಗಲ್ ರಂಗನಾಥ ಸ್ವಾಮಿ ಬೆಟ್ಟ ಹಾಗೂ ಸುತ್ತಮುತ್ತಲ ಗ್ರಾಮದ ಆಸುಪಾಸು, ಸಿಗೋಡಿಪುರ ಸುತ್ತಮುತ್ತಲು ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಮೇರೆಗೆ ಎಸ್.ದೊಡ್ಡಪುರ ಬೆಟ್ಟದ ತಪ್ಪಲಿನ ರಾಜೇಶ್ ಎಂಬುವರ ಜಮೀನಿನ ಬಳಿ ಐದು ದಿನಗಳ ಹಿಂದೆ ಬೋನು ಇಡಲಾಗಿತ್ತು.

ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಎಸ್.ಮಂಜುನಾಥ್, ಲೋಕೇಶ್ ಭೇಟಿ ನೀಡಿ ಸೆರೆಯಾದ ಚಿರತೆಯನ್ನು ಮೈಸೂರಿನ ಅರಣ್ಯ ಭವನಕ್ಕೆ ರವಾನಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.