ADVERTISEMENT

ಕತ್ತು ಕೊಯ್ದು ವ್ಯಕ್ತಿ ಕೊಲೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 14:26 IST
Last Updated 18 ಅಕ್ಟೋಬರ್ 2024, 14:26 IST
ಮೃತ ಸದಾಶಿವನ ಭಾವಚಿತ್ರ
ಮೃತ ಸದಾಶಿವನ ಭಾವಚಿತ್ರ   

ನಂಜನಗೂಡು: ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದ ಪ್ರೌಢಶಾಲೆ ಸಮೀಪದ ಹಳ್ಳದಲ್ಲಿ ಶುಕ್ರವಾರ ಮಲ್ಕುಂಡಿ ಗ್ರಾಮದ ಸದಾಶಿವ (48) ಎಂಬುವವರನ್ನು ಅಪರಿಚಿತ ದುಷ್ಕರ್ಮಿಗಳು ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ಮೃತರಿಗೆ ಪತ್ನಿ ಒಬ್ಬ ಮಗಹಾಗೂ ಮಗಳು ಇದ್ದಾರೆ. ಮೃತ ಸದಾಶಿವು ಅವರ ಅಣ್ಣ ರಂಗರಾಮು ಹುಲ್ಲಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿ, ಗುರುವಾರ ಮೈಸೂರಿಗೆ ಟೊಮೆಟೊ ಹಣ್ಣನ್ನು ಮಾರಾಟ ಮಾಡಿ ಶುಕ್ರವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಮನೆಗೆ ಬಂದ. ಯಾರೋ ದೂರವಾಣಿ ಕರೆ ಮಾಡಿರುವುದಾಗಿ ಹೇಳಿ ಹೋದವನು, ಮಡುವಿನಹಳ್ಳಿ ಗ್ರಾಮದ ಬಳಿ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ನಂಜನಗೂಡಿನ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗಾಗಿ ಆಂಬುಲೆನ್ಸ್‌‌‌‌ನಲ್ಲಿ ಕೊಂಡೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಕತ್ತು ಕೊಯ್ದು ಕೊಲೆ ಮಾಡಿದ್ದು, ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷೆ ವಿಧಿಸಬೇಕು ಎಂದು  ದೂರು ನೀಡಿದ್ದಾರೆ.

ADVERTISEMENT

ಘಟನೆ ಸ್ಥಳಕ್ಕೆ ಶ್ವಾನದಳದವರು ಭೇಟಿ ನೀಡಿ ಮಹಜರು ನಡೆಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಅರಿ ವಿಷ್ಣುವರ್ದನ್‌, ಡಿ.ವೈ.ಎಸ್.ಪಿ.ರಘು, ಪಿ.ಎಸ್.ಪಿ.ಚೇತನ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.