ADVERTISEMENT

ಚಿತ್ರ–ಕಥೆ: ರಸ್ತೆಬದಿ ಕಂಡ ಬಿಂಬಗಳು...

ಒಮ್ಮೆ ಮೈಸೂರಿನ ರಸ್ತೆಗಳಲ್ಲಿ ಸುತ್ತುತ್ತಾ ಬಿಡಿಚಿತ್ರಗಳನ್ನು ಜೇಬಿಗೆ ತುಂಬಿಕೊಳ್ಳುತ್ತಾ ಸಾಗಿದ ದಿನದ ಚಿತ್ರಣ ಇಲ್ಲಿದೆ.

ಪ್ರಜಾವಾಣಿ ವಿಶೇಷ
Published 3 ಮಾರ್ಚ್ 2024, 0:43 IST
Last Updated 3 ಮಾರ್ಚ್ 2024, 0:43 IST
<div class="paragraphs"><p>ಬೆಳ್ಳಂಬೆಳಿಗ್ಗೆ ಮೈಸೂರು ಸುತ್ತಲು ಹೊರಟ ಅವಿನಾಶ್‌ಗೆ ಚಹಾ ಕುಡಿಯಬೇಕೆನಿಸಿತು. ಆಗ, ಮೈಸೂರಿನ ಕೋರ್ಟ್‌ ಮುಂಭಾಗದ ರಸ್ತೆಬದಿಯ ಕಾಪರ್‌ ಪಾಡ್‌ ಮರಗಳು ಚೆಲ್ಲಿದ ಹೂವಿನ ಹಾಸಿಗೆಯ ಮೇಲೆ ಅವರ ದಣಿದ ಸೈಕಲ್‌ ವಿಶ್ರಮಿಸಿತು.</p></div>

ಬೆಳ್ಳಂಬೆಳಿಗ್ಗೆ ಮೈಸೂರು ಸುತ್ತಲು ಹೊರಟ ಅವಿನಾಶ್‌ಗೆ ಚಹಾ ಕುಡಿಯಬೇಕೆನಿಸಿತು. ಆಗ, ಮೈಸೂರಿನ ಕೋರ್ಟ್‌ ಮುಂಭಾಗದ ರಸ್ತೆಬದಿಯ ಕಾಪರ್‌ ಪಾಡ್‌ ಮರಗಳು ಚೆಲ್ಲಿದ ಹೂವಿನ ಹಾಸಿಗೆಯ ಮೇಲೆ ಅವರ ದಣಿದ ಸೈಕಲ್‌ ವಿಶ್ರಮಿಸಿತು.

   

ಮೈಸೂರು ಜಿಲ್ಲೆಯ ಕೆ.ಆರ್‌.ನಗರ ತಾಲ್ಲೂಕಿನ ಅವಿನಾಶ್‌ ದಮ್ನಳ್ಳಿ ಫೋಟೊಗ್ರಫಿ ಚಪಲದಿಂದಾಗಿ ಪತ್ರಕರ್ತ ವೃತ್ತಿಗೆ ವಿದಾಯ ಹೇಳಿದರು. ಈಗ ಮಳೆ, ಚಳಿ, ಗಾಳಿ, ಬಿಸಿಲೆನ್ನದೇ ಸೈಕಲ್‌ನ ಪೆಡಲ್‌ ತುಳಿಯುತ್ತಾ ರಾಜ್ಯವನ್ನೆಲ್ಲ ಸುತ್ತುತ್ತಿದ್ದಾರೆ. ಮುಂದೆ ಆ ಸೈಕಲ್‌ಗೆ ದೇಶವನ್ನೆಲ್ಲಾ ಸುತ್ತುವ ಹಂಬಲ.

ಒಮ್ಮೆ ಮೈಸೂರಿನ ರಸ್ತೆಗಳಲ್ಲಿ ಸುತ್ತುತ್ತಾ ಬಿಡಿಚಿತ್ರಗಳನ್ನು ಜೇಬಿಗೆ ತುಂಬಿಕೊಳ್ಳುತ್ತಾ ಸಾಗಿದ ದಿನದ ಚಿತ್ರಣ ಇಲ್ಲಿದೆ.

ADVERTISEMENT

ಚಿಕ್ಕಗಡಿಯಾರ ಸರ್ಕಲ್‌ನ ಫುಟ್‌ಪಾತ್‌ನಲ್ಲಿ, ತನ್ನ ಜಾಗವನ್ನು ಕಾಯ್ದಿರಿಸಿಕೊಂಡು ಕುಳಿತಿದ್ದ ಹಣ್ಣಿನಪುಟ್ಟಿ, ನೆರಳು–ಬೆಳಕಿನ ಸಂಯೋಜನೆಯಲ್ಲಿ ಸೈಕಲ್‌ ಏರಿ ಕುಳಿತು ವ್ಯಾಪಾರಕ್ಕೆ ಹೊರಟಂತೆ ಕಂಡಿತು.

ಬೆಕ್ಕುಗಳ ಬೆನ್ನು ಹತ್ತಿದ ಕ್ಯಾಮೆರಾಗೆ ಅಚ್ಚರಿ ಎದುರಾಯಿತು. ಬೀಡಾಡಿ ಹಸುವನ್ನು ಸೆರೆ ಹಿಡಿದಾಗ ಫ್ರೇಮ್‌ನಲ್ಲಿ ಬೇಟೆಗೆ ಹೊಂಚು ಹಾಕುತ್ತಿದ್ದ ಹುಲಿ! ಅದೂ, ನಗರದ ನಡುಮಧ್ಯ!

ದೇವರಾಜ ಮಾರ್ಕೆಟ್‌ನ ತರಕಾರಿ ಅಂಗಡಿಯಲ್ಲಿ ಮಾಲೀಕನಿಗಿನ್ನೂ  ಬೋಣಿ ಆಗಿಲ್ಲ. ಬೆಕ್ಕಂತೂ ಗಿರಾಕಿ ಅಲ್ಲ. ಆದರೆ ತರಕಾರಿ ಅಂಗಡಿಯಲ್ಲಿ ಬುಟ್ಟಿಗಳ ನಡುವೆ, ಚೀಲಗಳ ಸಂದಿಗಳಲ್ಲಿ ಕದ್ದುಮುಚ್ಚಿ ಸರಿಯುವ ಇಲಿಗಳ ಶಿಕಾರಿಗಂತೂ ಕೊರತೆ ಇಲ್ಲವಲ್ಲ.

ಮುಂಜಾನೆಯ ಚಳಿಯಲ್ಲಿ ಚಹಾ ಕುಡಿಯುತ್ತಿದ್ದ ಮಂದಿ ನಡುವೆ ಬೆಚ್ಚಗೆ ಕುಳಿತಿದ್ದ ಬೆಕ್ಕಿಗೆ, ಅವರ ರಾಜಕೀಯ ಗಾಸಿಪ್‌ ಅಷ್ಟೇನು ಆಸಕ್ತಿ ಕೆರಳಿಸಿದಂತೆ ಕಾಣಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.