ಮೈಸೂರು: ಮಹಾಜನ ಶಿಕ್ಷಣ ಸಂಸ್ಥೆಯ ವಿವೇಕಾನಂದ ಸಭಾಂಗಣದಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ರೋಟರಿ ವಲಯ 7ರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪ್ರಹ್ಲಾದ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ರೋಟರ್ಯಾಕ್ಟ್ ಸಹಾಯ ಮಾಡಲಿದೆ. ಇಲ್ಲಿನ ಭಾಗವಹಿಸುವಿಕೆಯು ಭವಿಷ್ಯದಲ್ಲಿ ಸಹಕಾರಿಯಾಗಲಿದ್ದು, ಉದ್ಯೋಗ ವಲಯದಲ್ಲಿ ಸಕ್ರಿಯರಾಗಿರಲು ಬೇಕಾದ ಗುಣಗಳ ಬಗ್ಗೆ ತಿಳಿಸಿಕೊಡುತ್ತದೆ’ ಎಂದು ತಿಳಿಸಿದರು.
ಸಂಘಟನೆಯ ಹಿಂದಿನ ಅಧ್ಯಕ್ಷ ಎಂ.ಎಸ್.ಶಶಾಂಕ್ ಗೌಡ ಅವರು ನೂತನ ಅಧ್ಯಕ್ಷ ಮೋಹಿತ್ ಪುರೋಹಿತ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿಯಾಗಿ ಅರ್ಮಾನ್ ಬಿಲಾಲ್, ಉಪಾಧ್ಯಕ್ಷೆಯಾಗಿ ಸಂಜನಾ ವಿ., ಜೊತೆ ಕಾರ್ಯದರ್ಶಿಯಾಗಿ ಅಭಯ್ ಮುರಳೀಧರ್ ಅಧಿಕಾರ ಸ್ವೀಕರಿಸಿದರು.
ರೋಟರಿ ವಲಯ 7ರ ಸಹಾಯಕ ಗವರ್ನರ್ ಕೆ.ಎ.ಪ್ರಹ್ಲಾದ, ಪ್ರಾಂಶುಪಾಲೆ ಬಿ.ಆರ್.ಜಯಕುಮಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.