ADVERTISEMENT

ಅತ್ತಹಳ್ಳಿ: ದೇವಸ್ಥಾನ ಹುಂಡಿ ಕಳವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 16:00 IST
Last Updated 13 ಜೂನ್ 2024, 16:00 IST

ಬನ್ನೂರು: ಹೋಬಳಿ ಆತ್ತಹಳ್ಳಿಯಲ್ಲಿನ ಆಂಜನೇಯ, ಮಂಟೇಸ್ವಾಮಿ, ಬೀರೇಶ್ವರ ದೇವಾಲಯಗಳಲ್ಲಿ ಹುಂಡಿ ಕಳ್ಳತನವಾದ ಘನೆ ಗುರುವಾರ ಬೆಳಗಿನ ಜಾವ ನಡೆದಿದೆ.

ಹುಂಡಿಯಲ್ಲಿನ ಹಣದೊಂದಿಗೆ, ದೇವರ ಬೆಳ್ಳಿ ಪದಾರ್ಥ ಖದೀಮರು ಕಳವು ಮಾಡಿದ್ದಾರೆ ಎಂದು ದೇವಸ್ಥಾನದ ಪುರೋಹಿತರು ತಿಳಿಸಿದ್ದಾರೆ.

ಈ ಸಂಬಂಧ ಸ್ಥಳಕ್ಕೆ ಬನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

‘ಹಳ್ಳಿಗಳಿಗೆ ಪೊಲೀಸರು ಗಸ್ತು ಬರುತ್ತಿಲ್ಲ. ಇದರಿಂದ ಅಪರಾಧ ಪ್ರಕರಣ ಹೆಚ್ಚುತ್ತಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.