ADVERTISEMENT

ಮೈಸೂರು: ರೈಲಿನಿಂದ ಜಿಗಿಯಲು ಯತ್ನಿಸಿದ ವೃದ್ಧ

​ಪ್ರಜಾವಾಣಿ ವಾರ್ತೆ
Published 30 ಮೇ 2024, 15:17 IST
Last Updated 30 ಮೇ 2024, 15:17 IST
ಚಲಿಸುವ ರೈಲಿನಿಂದ ಜಿಗಿಯಲು ಯತ್ನಿಸಿದ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೂಡಲಗೆರೆಯ ಈರಪ್ಪ ಶಂಕರಪ್ಪ ನಯನಾಪುರ ಅವರನ್ನು ಜೆಎಸ್ಎಸ್‌ ವೃದ್ಧರ ಆಶ್ರಮಕ್ಕೆ ಸೇರಿಸಲಾಯಿತು
ಚಲಿಸುವ ರೈಲಿನಿಂದ ಜಿಗಿಯಲು ಯತ್ನಿಸಿದ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೂಡಲಗೆರೆಯ ಈರಪ್ಪ ಶಂಕರಪ್ಪ ನಯನಾಪುರ ಅವರನ್ನು ಜೆಎಸ್ಎಸ್‌ ವೃದ್ಧರ ಆಶ್ರಮಕ್ಕೆ ಸೇರಿಸಲಾಯಿತು   

ಮೈಸೂರು: ಮಕ್ಕಳ ನಡವಳಿಕೆಯಿಂದ ನೊಂದ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೂಡಲಗೆರೆಯ ಈರಪ್ಪ ಶಂಕರಪ್ಪ ನಯನಾಪುರ ಅವರು ಮನೆ ಬಿಟ್ಟು ಮೈಸೂರಿಗೆ ಬರುತ್ತಿದ್ದ ಚಲಿಸುತ್ತಿದ್ದ ರೈಲಿನಲ್ಲಿ ಧುಮುಕಲು ಯತ್ನಿಸಿದ್ದಾರೆ. ಇತರೆ ಪ್ರಯಾಣಿಕರು ಅವರನ್ನು ರಕ್ಷಣೆ ಮಾಡಿ ರೈಲ್ವೆ ನಿಲ್ದಾಣಕ್ಕೆ ಕರೆತಂದರು.

ಮಾನವ ಹಕ್ಕು ಹೋರಾಟಗಾರ ಪ್ರಸನ್ನ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ  ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಬಸವರಾಜು ಅರವಿಂದ ನಗರದ ಜೆಎಸ್ಎಸ್‌ ವೃದ್ಧರ ಆಶ್ರಮಕ್ಕೆ ಕರೆದೊಯ್ಯಲು ಸೂಚಿಸಿದರು. ನಿಂಗರಾಜು, ಲೋಕೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT