ADVERTISEMENT

ನೈರುತ್ಯ ಶಿಕ್ಷಕರ ಕ್ಷೇತ್ರ | ಕಾಂಗ್ರೆಸ್‌–ಎನ್‌ಡಿಎ ಮೈತ್ರಿಕೂಟ ಪೈಪೋಟಿ

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 8, ಪದವೀಧರರ ಕ್ಷೇತ್ರದಲ್ಲಿ 10 ಮಂದಿ ಕಣದಲ್ಲಿ

​ಪ್ರಜಾವಾಣಿ ವಾರ್ತೆ
Published 21 ಮೇ 2024, 5:33 IST
Last Updated 21 ಮೇ 2024, 5:33 IST
   

ಮೈಸೂರು: ವಿಧಾನಪರಿಷತ್‌ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ. ರಮೇಶ್‌ ಶೆಟ್ಟಿ ನಾಮಪತ್ರ ವಾಪಸ್ ಪಡೆದಿದ್ದಾರೆ. 8 ಮಂದಿ ಕಣದಲ್ಲಿದ್ದಾರೆ. ಎಸ್.ಎಲ್. ಭೋಜೇಗೌಡ (ಜೆಡಿಎಸ್), ಕೆ.ಕೆ. ಮಂಜುನಾಥ್‌ ಕುಮಾರ್ (ಕಾಂಗ್ರೆಸ್‌), ಭಾಸ್ಕರ್‌ ಶೆಟ್ಟಿ, ನರೇಶ್ ಹೆಗಡೆ, ಎಸ್.ಆರ್. ಹರೀಶ್ ಆಚಾರ್ಯ, ಅರುಣ್ ಎಚ್‌.ಡಿ., ನಂಜೇಶ್ ಬಿ.ಆರ್. ಹಾಗೂ ಮಂಜುನಾಥ್‌ ಕೆ.ಕೆ. (ಪಕ್ಷೇತರರು) ಪೈಪೋಟಿಯಲ್ಲಿದ್ದಾರೆ.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ರಂಗಸ್ವಾಮಿ ಎಂ. ವಾಪಸ್ ನಾಮಪತ್ರ ವಾಪಸ್ ತೆಗೆದು ಕೊಂಡಿದ್ದು, 10 ಮಂದಿ ಕಣದಲ್ಲಿದ್ದಾರೆ.

ಕಣದಲ್ಲಿರುವವರು: ಆಯನೂರು ಮಂಜುನಾಥ್ (ಕಾಂಗ್ರೆಸ್), ಧನಂಜಯ ಸರ್ಜಿ (ಬಿಜೆಪಿ), ಜಿ.ಸಿ. ಪಟೇಲ್‌ (ಸರ್ವ ಜನತಾ ಪಾರ್ಟಿ), ದಿನಕರ್ ಉಲ್ಲಾಳ್, ಎಸ್.ಪಿ. ದಿನೇಶ್, ಬಿ. ಮಹಮ್ಮದ್, ಕೆ.ರಘುಪತಿ ಭಟ್, ಶೇಖ್ ಬಾವ ಮಂಗಳೂರು, ಷಡಕ್ಷರಪ್ಪ ಜಿ.ಆರ್. ಮತ್ತು ಎಸ್. ಮುಜಾಯಿದ್ ಸಿದ್ದಿಕಿ (ಎಲ್ಲರೂ ಪಕ್ಷೇತರರು).

ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 11 ಮಂದಿ ಕಣದಲ್ಲಿದ್ದು, ಪೈಪೋಟಿಯ ಸ್ಪಷ್ಟ ಚಿತ್ರಣ ಹೊರಬಿದ್ದಿದೆ. ಕಾಂಗ್ರೆಸ್‌ನ ಮರಿತಿಬ್ಬೇಗೌಡ ಹಾಗೂ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಕೆ.ವಿವೇಕಾ ನಂದ ನಡುವೆ ನೇರ ಹಣಾಹಣಿ ಕಂಡುಬಂದಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಈ.ಸಿ. ನಿಂಗರಾಜ್‌ ಗೌಡ ತಮ್ಮ ಉಮೇದುವಾರಿಕೆ ವಾಪಸ್ ಪಡೆದರು. ಜೊತೆಗೆ ಪಕ್ಷೇತರ ಅಭ್ಯರ್ಥಿ ರಾಜು ಕೆ.ಆರ್. ಕೂಡ ಹಿಂದೆ ಸರಿದಿದ್ದಾರೆ.

ಕಣದಲ್ಲಿರುವವರು: ಮರಿತಿಬ್ಬೇಗೌಡ (ಕಾಂಗ್ರೆಸ್), ಕೆ.ವಿವೇಕಾನಂದ (ಜೆಡಿ ಎಸ್), ನಾಗೇಂದ್ರ ಬಾಬು (ಕೆಜೆಪಿ), ವಾಟಾಳ್ ನಾಗರಾಜ್‌ (ಕನ್ನಡ ಚಳವಳಿ ವಾಟಾಳ್ ಪಕ್ಷ), ಅನಿಲ್‌ ಕುಮಾರ್, ಅಂಬರೀಷ್, ನಾಗಮಲ್ಲೇಶ್, ನಿಂಗ ರಾಜು ಎಸ್., ಕೆ.ಸಿ. ಪುಟ್ಟಸಿದ್ದಶೆಟ್ಟಿ, ಆರ್. ಮಹೇಶ್, ರಾಜು ಕೆ. (ಎಲ್ಲರೂ ಪಕ್ಷೇತರರು). ನಾಮಪತ್ರ ಹಿಂಪಡೆ ಯಲು ಸೋಮವಾರ ಕಡೆ ದಿನವಾಗಿತ್ತು.

ಚುನಾವಣಾ ಆಯೋಗದ ಸೂಚನೆ ಯಂತೆ ಮತದಾರರ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದು. ಈ ಚುನಾವಣೆಯಲ್ಲಿ ಎನ್‌ಒಟಿಎ (ನೋಟಾ) ಇರುವುದಿಲ್ಲ. ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು https://ceo.karnataka.gov.in/TGC_Electionroll2024/ ಜಾಲತಾಣದಲ್ಲಿ ಪಡೆಯಬಹುದು ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.