ADVERTISEMENT

ಎ. ಜಿ. ಶ್ರೀನಿವಾಸ್‍ ಗೆ ರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 14:55 IST
Last Updated 23 ಡಿಸೆಂಬರ್ 2023, 14:55 IST

ರಾಯಚೂರು: ಬೆಂಗಳೂರಿನಲ್ಲಿ ನಡೆದ ಕೃಷಿ ತಂತ್ರಜ್ಞರ ಸಂಸ್ಥೆಯ 55ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ  ಡಾ.ಎ. ಜಿ. ಶ್ರೀನಿವಾಸ್‍ರಿಗೆ ಡಾ.ಎಂ.ಪುಟ್ಟರುದ್ರಯ್ಯ ಸ್ಮಾರಕ ದತ್ತಿ ರಾಷ್ಟ್ರೀಯ 2023 ಪ್ರಶಸ್ತಿ  ಮಾಡಲಾಯಿತು.

 ಡಾ. ಶ್ರೀನಿವಾಸ್‍ ಕೀಟ ಕುಟುಂಬ ನಿಯಂತ್ರಣವೆಂಬ ವಿನೂತನ ಪದ್ಧತಿ ಮೂಲಕ ರಾಸಾಯನಿಕ ಕೀಟನಾಶಕಗಳನ್ನು ಬಳಸದೆ ಪ್ರಮುಖ ಕೀಟಪೀಡೆಗಳನ್ನು ಸಂಪೂರ್ಣ ಹತೋಟಿ ಮಾಡಿದ ಭಾರತದ ಪ್ರಥಮ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ. ಅವರು ಕೃಷಿಯಲ್ಲಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ವಿಭಾಗಗಳಲ್ಲಿ ಮಾಡಿದ ಸೇವೆಯನ್ನು ಪರಿಗಣಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಕೇಂದ್ರ ಸರ್ಕಾರದ ರೈತರ ಆದಾಯ ದ್ವಿಗುಣ ಸಬಲೀಕರಣ ಸಂಸ್ಥೆಯ ಅಧ್ಯಕ್ಷ ಅಶೋಕ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.