ADVERTISEMENT

ದೇವದುರ್ಗ: ಸಿಡಿಲು ಬಡಿದು ಮಹಿಳೆ, ಎಮ್ಮೆ ಸಾವು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 5:00 IST
Last Updated 3 ಅಕ್ಟೋಬರ್ 2024, 5:00 IST
<div class="paragraphs"><p>ಸಿಡಿಲು (ಸಾಂದರ್ಭಿಕ ಚಿತ್ರ )</p></div>

ಸಿಡಿಲು (ಸಾಂದರ್ಭಿಕ ಚಿತ್ರ )

   

ಜಾಲಹಳ್ಳಿ (ರಾಯಚೂರು ಜಿಲ್ಲೆ): ದೇವದುರ್ಗ ತಾಲ್ಲೂಕಿನ ಎಚ್.ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಜೇರದೊಡ್ಡಿಯಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಬಸಮ್ಮ ಮುದಕಪ್ಪ ಮುರಾಳ(55) ಹಾಗೂ ಎಮ್ಮೆಯೊಂದು ಮೃತಪಟ್ಟಿದೆ.

ಮುರಾಳ ಕುಟುಂಬದವರು ಕೃಷಿ ಜಮೀನಲ್ಲಿಯೇ ಅಶ್ರಯ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ರಾತ್ರಿ ಭಾರಿ ಮಳೆ, ಗುಡುಗು, ಮಿಂಚು, ಗಾಳಿ ಪ್ರಾರಂಭವಾಗಿತ್ತು. ಸಿಡಿಲು ಬಡಿದು ಬಸಮ್ಮ ಸ್ಥಳದ‌ಲೇ ಮೃತಪಟ್ಟರೆ, ಅವರ ಗರುಡಪ್ಪ ನಾಯಕ ಅವರಿಗೂ ಸಣ್ಣ, ಪುಟ್ಟ ಗಾಯಗಳಾಗಿವೆ. ಜಾಲಹಳ್ಳಿ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.