ADVERTISEMENT

ಕಾರು–ಸ್ಕೂಟರ್ ಡಿಕ್ಕಿ: ಬನ್ನಿ ಕೊಟ್ಟು ಮನೆಗೆ ಮರಳುತ್ತಿದ್ದ ಯುವತಿ ಸಾವು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 9:15 IST
Last Updated 13 ಅಕ್ಟೋಬರ್ 2024, 9:15 IST
<div class="paragraphs"><p>ಅಪಘಾತಕ್ಕೀಡಾದ ವಾಹನಗಳು (ಒಳಚಿತ್ರದಲ್ಲಿ ಮೃತ ಯುವತಿ ಸಾಕ್ಷಿ)</p></div>

ಅಪಘಾತಕ್ಕೀಡಾದ ವಾಹನಗಳು (ಒಳಚಿತ್ರದಲ್ಲಿ ಮೃತ ಯುವತಿ ಸಾಕ್ಷಿ)

   

ರಾಯಚೂರು: ನಗರದ ಕೃಷಿ ವಿಶ್ವವಿದ್ಯಾಲಯದ ಮುಂಭಾಗ ಶನಿವಾರ ರಾತ್ರಿ ಕಾರು, ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ನಗರದ ಉಪ ತಹಶೀಲ್ದಾರ್ ಬಸವರಾಜ ಅವರ ಪುತ್ರಿ ಸಾಕ್ಷಿ (22) ಮೃತಪಟ್ಟ ಯುವತಿ. ಸಂಬಂಧಿಕರಿಗೆ ಬನ್ನಿ ಕೊಟ್ಟು ಮರಳಿ ಮನೆಗೆ ಹೋಗುವ ಮಾರ್ಗದಲ್ಲಿ ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ತಲೆಗೆ ಬಲವಾಗಿ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಕೂಟರ್ ನಡೆಸುತ್ತಿದ್ದ ಸಂಜನಾಳಿಗೆ ಕಾಲು ಮುರಿದಿದ್ದು, ಹಿಂಬದಿ ಕುಳಿತ ಯುವತಿ ಮೃತಪಟ್ಟಿದ್ದಾಳೆ.

ADVERTISEMENT

ಕಾರು ಚಾಲಕ ಪರಾರಿಯಾಗಿದ್ದಾನೆ.

ನಗರದ ಸಂಚಾರ ಠಾಣೆ ಪೊಲೀಸರು ವಾಹನಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.