ADVERTISEMENT

ಪ್ರತಿಭೆ ಅನಾವರಣಕ್ಕೆ ವೇದಿಕೆ; ಅನಂತರಾಜ ನಾಯಕ

​ಪ್ರಜಾವಾಣಿ ವಾರ್ತೆ
Published 8 ಮೇ 2022, 4:08 IST
Last Updated 8 ಮೇ 2022, 4:08 IST
ದೇವದುರ್ಗ ತಾಲ್ಲೂಕಿನ ಅರಕೇರಾದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಲೇವೆನ್ ಸ್ಟಾರ್ ತಂಡಕ್ಕೆ ಬಿಜೆಪಿ ಮುಖಂಡ ಕೆ.ಅನಂತರಾಜ ನಾಯಕ ಬಹುಮಾನ ವಿತರಿಸಿದರು
ದೇವದುರ್ಗ ತಾಲ್ಲೂಕಿನ ಅರಕೇರಾದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಲೇವೆನ್ ಸ್ಟಾರ್ ತಂಡಕ್ಕೆ ಬಿಜೆಪಿ ಮುಖಂಡ ಕೆ.ಅನಂತರಾಜ ನಾಯಕ ಬಹುಮಾನ ವಿತರಿಸಿದರು   

ಅರಕೇರಾ (ದೇವದುರ್ಗ): ಗ್ರಾಮೀಣ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದರೆ ಸ್ಥಳೀಯ ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಅವಕಾಶ ಲಭಿಸಲಿದೆ ಎಂದು ಬಿಜೆಪಿ ಮುಖಂಡ ಕೆ ಅನಂತರಾಜ ನಾಯಕ ಹೇಳಿದರು.

ಗ್ರಾಮದಲ್ಲಿ ರಂಜಾನ್ ಅಂಗ ವಾಗಿ ಶಾಸಕ ಕೆ.ಶಿವನಗೌಡ ನಾಯಕ ಪ್ರಾಯೋಜಕತ್ವದಲ್ಲಿ ಆಯೋಜಿ ಸಿದ್ದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ದಲ್ಲಿ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಬಹುತೇಕರಲ್ಲಿ ಪ್ರತಿಭೆ ಇರುತ್ತದೆ. ಆದರೆ, ಅದನ್ನು ಪ್ರದರ್ಶಿಸಲು ಅವಕಾಶ ಸಿಗುವುದಿಲ್ಲ. ಪ್ರೌಢ ಶಾಲೆ, ಕಾಲೇಜು ಹಂತದ ವಿದ್ಯಾರ್ಥಿಗಳು ಇಂತಹ ಪಂದ್ಯಾವಳಿಯಲ್ಲಿ ತಮ್ಮ ಸಾಮರ್ಥ್ಯ ತೋರಿಸಿಬೇಕು. ಬಳಿಕ ವಿಶ್ವವಿದ್ಯಾಲಯ, ರಣಜಿಯಂತಹ ತಂಡಗಳಲ್ಲಿ ಆಡಲು ಅವಕಾಶ ದೊರೆಯುತ್ತದೆ ಎಂದು ತಿಳಿಸಿದರು.

ADVERTISEMENT

ಆಟದಲ್ಲಿ ಸೋಲು– ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಕ್ರೀಡೆ ಅಥವಾ ಜೀವನದಲ್ಲಿ ಸೋತಾಗ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಹೊರತು ಆತ್ಮವಿಶ್ವಾಸ ಕಳೆದು ಕೊಳ್ಳಬಾರದು ಎಂದು ಹೇಳಿದರು.

ಜಿ.ಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ, ಶರಣಪ್ಪ ಬುದ್ದಿನ್ನಿ, ರಾಚಯ್ಯಸ್ವಾಮಿ ಮಠಪತಿ, ವಾಸುದೇವ ನಾಯಕ, ನಾಗರಾಜ ನಾಯಕ ಕರ್ನಾಳ, ಇಮ್ರಾನ್, ದಾವುದ್, ಸಲೀಂ ಸಾಬ್, ಗ್ರಾ.ಪಂ ಸದಸ್ಯ ವೆಂಕಟೇಶ ನಾಯಕ, ಇಸ್ಮಾಯಿಲ್ ಸಾಬ್, ಕಾಸೀಂ ಟೈಲರ್, ಪಂದ್ಯದ ವ್ಯವಸ್ಥಾಪಕರಾದ ಕೆ.ಭಗವಂತ್ರಾಯ ನಾಯಕ ಜುಟಮರಡಿ, ರವಿನಾಯಕ, ಹನ್ಮಂತ್ರಾಯ ಪೂಜಾರಿ ಇದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.