ADVERTISEMENT

ಕವಿತಾಳ: ಬಿಜೆಪಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 15:43 IST
Last Updated 10 ಫೆಬ್ರುವರಿ 2024, 15:43 IST
ಕವಿತಾಳ ಸಮೀಪದ ವಟಗಲ್‌ ಗ್ರಾಮದಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಬಿಜೆಪಿ ಮುಖಂಡರು ಶನಿವಾರ ಚಾಲನೆ ನೀಡಿದರು
ಕವಿತಾಳ ಸಮೀಪದ ವಟಗಲ್‌ ಗ್ರಾಮದಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಬಿಜೆಪಿ ಮುಖಂಡರು ಶನಿವಾರ ಚಾಲನೆ ನೀಡಿದರು   

ಕವಿತಾಳ: ‘ಕಿಸಾನ್‌ ಸಮ್ಮಾನ್‌, ಆಯುಷ್ಮಾನ್‌ ಭಾರತ ಮತ್ತು ಸುಕನ್ಯಾ ಸಮೃದ್ದಿ ಸೇರಿದಂತೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಕುರಿತು ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದು ಬಿಜೆಪಿ ಮುಖಂಡ ಚಂದ್ರಕಾಂತ ಪಾಟೀಲ ಗೂಗೆಬಾಳ ಹೇಳಿದರು.

ಸಮೀಪದ ವಟಗಲ್‌ ಗ್ರಾಮದಲ್ಲಿ ಶನಿವಾರ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ತಳಮಟ್ಟದಲ್ಲಿ ಶ್ರಮಿಸುವ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ಜೀವಾಳವಿದ್ದಂತೆ’ ಎಂದು ಹೇಳಿದರು.

ಮುಖಂಡರಾದ ಜಗಧೀಶ್ಚಂದ್ರಸ್ವಾಮಿ ಹಾಲಾಪುರ, ಶಿವಕುಮಾರ ಪಾಟೀಲ, ಮಲ್ಲನಗೌಡ ಮಾಲೀಪಾಟೀಲ, ಆದನಗೌಡ ಪಾಟೀಲ, ಬಸನಗೌಡ ಸಿಂಧನೂರು, ಭರತ ಗೌಡ, ರೆಡೆಪ್ಪ ನಾಡಗೌಡ, ಲಿಂಗರಾಜ ಯಲೇರಿ, ಅಮರೇಶ ನಾಯಕ, ಮತ್ತು ರುದ್ರುಗೌಡ ವೀರನಗೌಡ್ರು, ಮಲ್ಲಿಕಾರ್ಜುನ ವೀರನಗೌಡ್ರು, ಅಕ್ಷಯ ನಾಯಕ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.