ADVERTISEMENT

ರಾಯಚೂರು | ಬಣವೆಗೆ ಬೆಂಕಿ; ₹40 ಸಾವಿರ ಮೌಲ್ಯದ ಹುಲ್ಲು ಭಸ್ಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 15:31 IST
Last Updated 17 ಏಪ್ರಿಲ್ 2024, 15:31 IST
ರಾಯಚೂರು ತಾಲ್ಲೂಕಿನ ದುಗನೂರು ಗ್ರಾಮದಲ್ಲಿ ಬಣವೆ ಬೆಂಕಿ ಹೊತ್ತಿಕೊಂಡು ಹುಲ್ಲು ಭಸ್ಮವಾಗಿದೆ
ರಾಯಚೂರು ತಾಲ್ಲೂಕಿನ ದುಗನೂರು ಗ್ರಾಮದಲ್ಲಿ ಬಣವೆ ಬೆಂಕಿ ಹೊತ್ತಿಕೊಂಡು ಹುಲ್ಲು ಭಸ್ಮವಾಗಿದೆ   

ರಾಯಚೂರು: ತಾಲ್ಲೂಕಿನ ದುಗನೂರು ಗ್ರಾಮದಲ್ಲಿ ಬುಧವಾರ ಶರಣಪ್ ಅವರ ಭತ್ತದ ಬಣವೆಗೆ ಬೆಂಕಿ ಹೊತ್ತಿಕೊಂಡು ಅಂದಾಜು ₹40 ಸಾವಿರ ಬೆಲೆಯ ಹುಲ್ಲು ಭಸ್ಮವಾಗಿದೆ.

ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಬರ ಆವರಿಸಿದ್ದು ಇಂತಹ ಸಂದರ್ಭದಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವು ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಭಸ್ಮವಾಗಿದ್ದು ಚಿಂತೆಗೀಡುವಂತಾಗಿದೆ ಎಂದು ರೈತ ಶರಣಪ್ಪ ಅಳಲು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT